ವರದಿ: ವೆಂಕಟೇಶ ಮೇಸ್ತ ಹೊನ್ನಾವರ
ಹೊನ್ನಾವರ – ಪಟ್ಟಣ ಪಂಚಾಯತ ಹೊನ್ನಾವರದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯೆಂದು ಪೌರಕಾರ್ಮಿಕರಿಗೆ ಸನ್ಮಾನ ಹಾಗು ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತರವರು ಪೌರಕಾರ್ಮಿಕರು ಮಾಡುವ ಕೆಲಸ ದೇವರ ಕೆಲಸದಷ್ಟೆ ಅತ್ಯಂತ ಪವಿತ್ರವಾದದ್ದು.ಅವರು ಕಾರ್ಯಕ್ಕೆ ನಾವು ಸದಾ ಕೃತಜ್ಞಾರಾಗಿರಬೇಕು. ಪಟ್ಟಣವನ್ನು ಸ್ವಚ್ಚವಾಗಿಡುವ ಕಾಯಕಕ್ಕಾಗಿ ಅವರು ನಿತ್ಯವು ನಸುಕಿನಿಂದಲೇ ಕಾರ್ಯಾರಂಭಮಾಡುತ್ತಾರೆ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲು ಒಂದು ದಿನವು ತಪ್ಪದೇ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ಹಿರಿಯ ಲಯನ್ಸ್ ಸದಸ್ಯರು, ಮಾಜಿ ಪ್ರಾಂಶುಪಾಲರು ಆದ ಎಸ್ ಜೆ ಕೈರನ್ ರವರು ಮಾತನಾಡಿ ನಮ್ಮ ಪೌರಕಾರ್ಮಿಕರು.ಇಡೀ ನಗರವನ್ನೆ ಸ್ವಚ್ಚಗೊಳಿಸಿ ನಮ್ಮನ್ನು ಆರೋಗ್ಯ ಉತ್ತಮವಾಗಿಡಲು ಹಗಲಿರುಳು ಶ್ರಮಿಸುತ್ತಾರೆ. ಅಂತಹವರನ್ನು ಸದಾ ಗೌರವಿಸಿ ಸ್ಮರಿಸಬೆಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ನಾಗರಾಜ ನಾಯ್ಕಡ್, ಮುಖ್ಯಾಧಿಕಾರಿ ಪ್ರವೀಣನಾಯಕ, ಪಟ್ಟಣಪಂಚಾಯತ ಉಪಾಧ್ಯಕ್ಷೆ ಮೇಧಾ ನಾಯ್ಕ ಉಪಸ್ಥಿತರಿದ್ದರು. ಪಟ್ಟಣ ಪಂಚಾಯತ ಸದಸ್ಯರಾದ ಜೋಸ್ಪಿನ್ ಡಾಯಾಸ , ಸುಬ್ರಾಯ ಗೌಡ, ಸುರೇಶ ಹೊನ್ನಾವರ, ನಾಗರಾಜ ಭಟ್ಟ, ಶ್ರೀಪಾದ ನಾಯ್ಕ, ಭಾಗ್ಯಾ ಲೋಕೇಶ ಮೇಸ್ತ, ಸುಜಾತ ಯೋಗೇಶ ಮೇಸ್ತ, ಸುಭಾಷ ಹರಿಜನ್,ವಿನೋದ ಮೇಸ್ತ, ನೀಶಾ ಮೋಹನ ಶೇಟ್ರವರು ಪಾಲ್ಗೊಂಡು ಪೌರಕಾರ್ಮಿಕರನ್ನು ಸನ್ಮಾನಿಸಿದರು. ಸಿಬ್ಬಂದಿಗಳಾದ ಸದಾನಂದ ನಾಯ್ಕ,ವೆಂಕಟೇಶ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಪ್ರವೀಣ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ನೀರೀಕ್ಷಕ ಸುನೀಲ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
More Stories
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು