ಬಾಗೇಪಲ್ಲಿ:-ತಾಲ್ಲೂಕು ಗೂಳೂರು ಗ್ರಾಮದ ಮುಖ್ಯ ರಸ್ತೆಯ ಕ್ರಿಶ್ಚಿಯನ್ ಚರ್ಚ್ ಮುಂಭಾಗ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಸರ್ವ ಸದಸ್ಯರ ಸಭೆ ಹಾಗೂ ಹೋಬಳಿ ಘಟಕ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಸಂಚಾಲಕರಾದ ಪೈಪಲ್ಯ ರವಿರವರು, ದಲಿತ ಸಂಘರ್ಷ ಸಮಿತಿ ಬುದ್ಧ, ಬಸವ, ಅಂಬೇಡ್ಕರ್ ಅವರು ಹೇಳಿದ ತತ್ವಗಳ ಮೇಲೆ ನಿಂತಿರುತ್ತದೆ,
ಶೋಷಿತ ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವುದರ ಜೊತೆಗೆ ಜಾತಿಮುಕ್ತ ಸಮಾಜ ಕಟ್ಟಬೇಕು, ಹೋಬಳಿ ಶಾಖೆಯಲ್ಲಿ ಆಯ್ಕೆಯಾದ ಅಧ್ಯಕ್ಷರುಗಳು ಯಾವುದೇ ರೀತಿಯಾಗಿ ಹಣ ಲೂಟಿ ಮಾಡಿದೆ, ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು ,ಕೇವಲ ಜನರ ಅನುಕೂಲಕ್ಕಾಗಿ ನೀವು ಅಧಿಕಾರವನ್ನು ಉಪಯೋಗಿಸಬೇಕೆಂದು, ಹಾಗೂ ಸಂಘಟನೆಗೆ ಧಕ್ಕೆ ತರಬಾರದು ಎಂದು ತಿಳಿಸಿದರು, ಸುಮಾರು ವರ್ಷಗಲಿಂದ ದಲಿತ ಸಂಘರ್ಷ ಸಮಿತಿ ಜನರ ಸಮಸ್ಯೆಗಳನ್ನು ನಿವಾರಿಸುತ್ತಾ, ಹಾಗೂ ಹೋರಾಟಗಳನ್ನು ಮಾಡಿ ಜನರ ಪರವಾಗಿ ನಿಂತಿರುವ ಒಂದು ಸಂಘಟನೆಯಾಗಿದೆ ಎಂದು ತಿಳಿಸಿದರು.
ಗೂಳೂರು ಹೋಬಳೀ ಸಂಚಾಲಕರಾದ ಸೂರಿ ನಾರಾಯಣರವರು ಮಾತನಾಡಿ, ಸಂಘಟನೆಯ ಒಂದು ಜಾತಿಗೆ ಸೀಮಿತವಾಗಿಲ್ಲ ಎಲ್ಲಾ ಬಡಜನರ ಕುಂದುಕೊರತೆಗಳನ್ನು ನಿವಾರಿಸಿಲೀಕ್ಕೆ ದಲಿತ ಸಂಘರ್ಷ ಸಮಿತಿ ಹುಟ್ಟಿಕೊಂಡಿದೆ, ಜನರ ಸಮಸ್ಯೆಗಳನ್ನು ಬಗೆಹರಿಸಲು ಮಾತ್ರ ಹೋರಾಟಗಳನ್ನು ಮಾಡುತ್ತೇವೆ, ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಜಾಸ್ತಿಯಾಗುತ್ತಿದ್ದು ಅದರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು, ನಮ್ಮ ಹೋಬಳಿ ಬಡ ಜನರ ಕುಂದು ಕೊರತೆಗಳನ್ನು ನಿವಾರಿಸುವ ಶ್ರಮಿಸುತ್ತೇವೆ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಬಿವಿ ವೆಂಕಟ್ರಮಣ, ತಾಲ್ಲೂಕು ಸಂಚಾಲಕರಾದ ಪೈಪಾಳ್ಯ ರವಿ , ಸಂಘಟನಾ ಸಂಚಾಲಕರುಗಳಾದ ಎಲ್.ಎನ್.ನರಸಿಂಹಯ್ಯ, , ಡಿ.ಕೆ.ರಮೇಶ್, ಜಯಂತ್ , ಗೂಳೂರು ಹೋಬಳಿ ಸಂಚಾಲಕರಾಗಿ:- ಮದ್ದಲಖಾನ ಸೂರಿ. ಹೋಬಳಿ ಸಂಘಟನಾ ಸಂಚಾಲಕರುಗಳಾಗಿ:-ವಿಜಯ್ ಕುಮಾರ್-ಚೆರ್ರಲೋಪಲ್ಲಿ ,ಮಂಜುನಾಥ-ಜಿ.ಮದ್ದೇಪಲ್ಲಿ, ಗಂಗುಲಪ್ಪ-ನಲ್ಲಪರೆಡ್ಡಿಪಲ್ಲಿ,ಸುನಿಲ್- ಕೊತ್ತೂರು., ನಂಜುoಡಪ್ಪ- ಮೊಟಕಪಲ್ಲಿ, ,ವೆಂಕಟೇಶ-ಸದ್ದಪಲಿ ,ಶ್ರೀನಿವಾಸ- ಚೆಂಚುರಾಯನಪಲ್ಲಿ. ಖಜಾoಚಿ:- ರಾಮಾಂಜಿ-ತಿಮ್ಮoಪಲ್ಲಿ, ಹೋಬಳಿ ಸಮಿತಿ ಸದಸ್ಯರಾಗಿ ನಂಜುAಡಪ್ಪ, ಅಂಜಿನಪ್ಪ, ನರಸಿoಹಯ್ಯ, ವೆಂಕಟೇಶ್ ಎಂ.ಎನ್ ಮಾರಗಾನುಕುಂಟೆ ಜಯಪ್ಪ, ನರಸಪ್ಪ, ಆನಂದ್.
ಕೊತ್ತೂರು ಶೀನಾ ರವರು ಸರ್ವಾನುಮತದಿಂದ ಆಯ್ಕೆಯಾದರು
ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ.
More Stories
ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ
ಗುರಿ ಮುಟ್ಟಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು- ಡಾ. ಎ.ಹೆಚ್.ರಾಮರಾವ್