ಕುಮಟಾ: ತಾಲೂಕಿನ ಹೆಗಡೆ ಹೆಣ್ಣುಮಕ್ಕಳ ಶಾಲೆಯ ೧೨೭ ವಿದ್ಯಾರ್ಥಿನಿಯರು , ೬ ಶಿಕ್ಷಕರು ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮ ನಿಮಿತ್ತ ಕನ್ನಡದ ಮೂರು ಗೀತೆಗಳ ಗೀತಗಾಯನ ಹಾಡಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಪ್ರಕಾಶ್ ನಾಯ್ಕ, ಉಪಾಧ್ಯಕ್ಷೆ ಯೋಗಿತ ನಾಯ್ಕ, ಕಾರ್ಯಕ್ರಮಕ್ಕೆ ಇಲಾಖೆಯಿಂದ ವೀಕ್ಷಕರಾಗಿ ಆಗಮಿಸಿದ ಬಿ ಆರ್ ಪಿ ಉಲ್ಲಾಸ್ ನಾಯ್ಕ, ಸಿಆರ್ಪಿ ಮಹೇಶ್ ನಾಯ್ಕ, ಹೆಗಡೆ ಸಿಆರ್ಪಿ ನರಹರಿ ಭಟ್, ಪಾಲಕ-ಪೋಷಕರು ಉಪಸ್ಥಿತರಿದ್ದರು.
ಮುಖ್ಯ ಅಧ್ಯಾಪಕರಾದ ಮಂಗಳ ಹೆಬ್ಬಾರ್ ಸ್ವಾಗತಿಸಿದರು ಶಿಕ್ಷಕ ಶ್ರೀಧರ ಗೌಡ ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿದರು. ದೈಹಿಕ ಶಿಕ್ಷಕಿ ಶಾಮಲಾ ಪಟಗಾರ್ ಸಂಕಲ್ಪ ಪ್ರತಿಜ್ಞಾವಿಧಿ ಬೋಧಿಸಿದರು ಶಿಕ್ಷಕ ನಾಗರಾಜ್ ಶೆಟ್ಟಿ ವಂದನಾರ್ಪಣೆ ಮಾಡಿದರು.
ಸಹ ಶಿಕ್ಷಕಿ ಯರಾದ ರೇಣುಕಾ ನಾಯ್ಕ, ನಯನಾ ಪಟಗಾರ ಹಾಗೂ ಮುಖ್ಯ ಅಡುಗೆಯವರಾದ ಜಯಂತಿ ಭಂಡಾರಿ ಸಹಕರಿಸಿದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ