May 12, 2024

Bhavana Tv

Its Your Channel

ಕುಮಟಾದ ಉಪ್ಪಾರಕೇರಿಯಲ್ಲಿ ಪವರ್ ಸ್ಟಾರ್ ಪುನೀತರಾಜಕುಮಾರರಿಗೆ ಅಭಿಮಾನ ಬಳಗದಿಂದ ಶ್ರದ್ಧಾಂಜಲಿ

ಕುಮಟಾ ಪಟ್ಟಣದ ಉಪ್ಪಾರಕೇರಿಯಲ್ಲಿ ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತರಾಜಕುಮಾರ ಅವರಿಗೆ ಅಭಿಮಾನ ಬಳಗದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕನ್ನಡದ ಖ್ಯಾತ ನಟ ಪುನೀತ್ ಕುಮಟಾಕ್ಕೆ ಕೆಲವು ದಿನಗಳ ಹಿಂದೆ ಆಗಮಿಸಿದ್ದರು. ಅವರ ಅಭಿಮಾನಿಗಳು ಪಟ್ಟಣದ ಉಪ್ಪಾರಕೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಬಾರದ ಲೋಕಕ್ಕೆ ಪಯಣಿಸಿದ ನಟನೆಯ ಕುರಿತು ಅಭಿಮಾನಿಗಳು ಹಂಚಿಕೊOಡರು.

ಚಿಕ್ಕ ಮಕ್ಕಳು ಸೇರಿದಂತೆ ಅವರ ಅಪಾರ ಅಭಿಮಾನಿಗಳು ಮೆಣದಬತ್ತಿ ಬೆಳಗಿ ಅಗಲಿದ ನಟನಿಗೆ ಅಂತಿಮ ವಿಧಾನ ಅರ್ಪಿಸಿದರು.
ಈ ಸಂದರ್ಭದಲ್ಲಿ ಪಾಂಡು ಉಪ್ಪಾರ, ಶಂಕರ ಉಪ್ಪಾರ, ರಾಜು ಉಪ್ಪಾರ, ಗಣಪತಿ ಉಪ್ಪಾರ, ಮಹೇಶ ಉಪ್ಪಾರ, ದತ್ತಾ ಉಪ್ಪಾರ, ಈಶ್ವರ ಉಪ್ಪಾರ, ದಯಾನಂದ ಉಪ್ಪಾರ, ರಾಜೀವ ಉಪ್ಪಾರ ಇದ್ದರು.

error: