ನಾಗಮಂಗಲ .ಮಂಡ್ಯ ಜಿಲ್ಲೆ ವಿಧಾನಪರಿಷತ್ ಚುನಾವಣೆ ಪ್ರಚಾರದ ಜನ ಪ್ರತಿನಿಧಿಗಳ ಸಂಪರ್ಕ ಕಾರ್ಯಕ್ರಮವನ್ನು ನಾಗಮಂಗಲದ ಎಸ್.ಎಲ್.ಎನ್. ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಸಿ. ನಾರಾಯಣ್ ಗೌಡರವರು ಮಂಡ್ಯ ಜಿಲ್ಲೆಯಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಬೂಕನಳ್ಳಿ ಮಂಜುರವರ ಗೆಲುವು ನಿಶ್ಚಿತವಾಗಿದೆ ಇವರ ಗೆಲುವಿಂದ ನಮ್ಮೆಲ್ಲರಿಗೂ ಕೂಡ ಮತ್ತಷ್ಟು ಬಲ ಬರಲಿದೆ ಮಂಡ್ಯ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿ. ಪಟ್ಟಣ ಪಂಚಾಯಿತಿ. ಪುರಸಭೆಯ ವ್ಯಾಪ್ತಿಯ ಸದಸ್ಯರುಗಳು .ಅತಿ ಹೆಚ್ಚಿನ ಮತಗಳನ್ನು ನೀಡಿ ಬಿಜೆಪಿ ಯ ವಿಧಾನ ಪರಿಷತ್ ಅಭ್ಯರ್ಥಿಯಾದ ಮಂಜು ರವರನ್ನು ಅತ್ಯಧಿಕ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕೆಂದರು ನಿಮ್ಮೆಲ್ಲರ ಬೆಂಬಲದಿAದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಐದು ಕ್ಷೇತ್ರಗಳು ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು
ವಿಧಾನಪರಿಷತ್ ಸ್ಪರ್ಧೆ ಮಂಜುರವರು ಮಾತನಾಡಿ ಜನರಿಂದ ಆಯ್ಕೆಯಾದ ವ್ಯಕ್ತಿಗಳಿಂದ ಮತಗಳನ್ನು ಪಡೆದ ನಾವು ಅವರೊಟ್ಟಿಗೆ ಒಡನಾಟ ಇಟ್ಟುಕೊಂಡಿರಬೇಕು ಮತ ನೀಡಿದ ನಂತರ ಅವರನ್ನು ತಿರಸ್ಕಾರ ಮನೋಭಾವದಿಂದ ನೋಡಬಾರದು ಏಕೆಂದರೆ ಹಿಂದೆ ನಿಮ್ಮ ಮತ ಪಡೆದು ಆಯ್ಕೆ ಆದಂತ ವ್ಯಕ್ತಿ ಎಂದು ಕೂಡ ನಿಮ್ಮಗಳಿಗೆ ಸ್ಪಂದಿಸಿಲ್ಲ ಆದ್ದರಿಂದ ಉತ್ತಮ ವ್ಯಕ್ತಿ ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ನಿಮ್ಮ ಮತಗಳು ಬಿಜೆಪಿ ಪಕ್ಷದ ಬಲಪಡಿಸಲು ಸಹಕಾರಿಯಾಗಲಿದೆ ಎಂದರು
ಜಿಲ್ಲಾಧ್ಯಕ್ಷರಾದ ಕೆ.ಜೆ. ವಿಜಿ ಕುಮಾರ್,ನಾಗಮಂಗಲ ತಾಲೂಕು ಬಿಜೆಪಿ ಅಧ್ಯಕ್ಷ ಸೋಮಶೇಖರ್, ನಿಕಟಪೂರ್ವ ಅಧ್ಯಕ್ಷರು ನರಸಿಂಹಮೂರ್ತಿ ವಕೀಲರಾದ ಸ್ವಾಮಿ ವಿನೋದ್ ಕುಮಾರ್ ಅಪಾರ ಸಂಖ್ಯೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ