ಇಲಕಲ್ ತಾಲ್ಲೂಕಿನ ದಂಡಾಧಿಕಾರಿಗಳ ಆವರಣದಲ್ಲಿ ವಯಸ್ಸಾದ ಅಜ್ಜಿಯು ಕುಳಿತುಕೊಂಡಿತ್ತು. ಕರ್ತವ್ಯನಿರತರಾಗಿ ಕೆಲಸ ನಿರ್ವಹಿಸುತ್ತಿದ್ದ ನಗರ
ಪಿಎಸ್ ಐ ಶಿವರಾಜ ನಾಯಕವಾಡಿಯವರು ಹೊರಗಡೆ ಸುಮ್ಮನೆ ಕೂತಿದ್ದ ಅಜ್ಜಿಯನ್ನು ಗಮನಿಸಿ ವಿಚಾರಿಸಿದಾಗ ವೃದ್ಧಾಪ್ಯ ವೇತನದ ಸಲುವಾಗಿ ಕಚೇರಿಗೆ ಬಂದಿದ್ದೇನೆ ಎಂದಳು.
ಆಗ ಪಿಎಸ್ ಐ ಅವರು ಅಜ್ಜಿಗೆ ಬಿಸ್ಕಿಟ್ ಚಾ ನೀಡುವುದರ ಮೂಲಕ ಮಾನವೀಯತೆ ಮೆರೆದು, ಪತ್ರಕರ್ತರ ಸಹಾಯದ ಮೂಲಕ ಅಜ್ಜಿಗೆ ವೃದ್ಧಾಪ್ಯ ವೇತನಕೊಡಿಸುವಲ್ಲಿ ಅಳಿಲು ಸೇವೆ ಮಾಡಿದರು.
ಅಲ್ಲದೆ ಅಜ್ಜಿಯ ವೃದ್ಧಾಪ್ಯ ವೇತನದ ಮಾಹಿತಿಯನ್ನು ತಿಳಿಸಿದ ಕೂಡಲೇ ತಾಲ್ಲೂಕು ದಂಡಾಧಿಕಾರಿಗಳ ಕಛೇರಿಯ ಗ್ರೇಡ್ 2 ತಹಸೀಲ್ದಾರ್ ಏ ರತ್ನಮ್ಮ, ವಜ್ಜಲ್ ಮತ್ತು ಗುರುವಿನಮಠ ಅವರು ಸ್ಪಂದಿಸಿ ಸ್ಥಳದಲ್ಲಿಯೇ ವೃದ್ಧಾಪ್ಯ ವೇತನಕ್ಕೆ ಸಹಿ ಹಾಕುವ ಮೂಲಕ ಮಾನವೀಯತೆ ಮೆರೆದರು.
ವರದಿ: ವಿನೋದ ಬಾರಿಗಿಡದ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ