ಹೊನ್ನಾವರ:- ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಲಕ್ಷ್ಮೀ ಮೆಡಿಕಲ್ಸ್ ಶುಭಾರಂಭ ಗೊಂಡಿದೆ.ಆರ್ಥಿಕವಾಗಿ ತೀರಾ ಬಡತನದಲ್ಲಿದ್ದಾಗ ವೈದ್ಯರು ಬರೆದ ಔಷಧ ಖರೀದಿಗಾಗಿ ಸಂಕಷ್ಟ ಅನುಭವಿಸಿದ ಅನುಭವವುಳ್ಳ ಕರಿಕುರ್ವದ ಕೇಶವ ಮೇಸ್ತ ಕುಟುಂಬದವರು, ಈಗ ದೇವರ ದಯೆಯಿಂದ ಹಂತ ಹಂತವಾಗಿ ಬೆಳೆದು ಅನುಕೂಲಕರ ಸ್ಥಿತಿಗೆ ತಲುಪಿದ್ದಾರೆ.
ಆದರೂ ಹಿಂದಿನ ದಿನಗಳನ್ನು ಸದಾ ನೆನಪಿಸಿಕೊಳ್ಳುವ ಇವರು, ನಮಗಾದ ತೊಂದರೆಯ ಅನುಭವ ಈಗಿನವರಿಗೆ ಆಗಬಾರದು ಎಂಬ ಸದುದ್ದೇಶದಿಂದ, ಕುಟುಂಬದವರ ಹಾಗೂ ಗೆಳೆಯರ ಸಹಕಾರದೊಂದಿಗೆ ಕವಲಕ್ಕಿಯಲ್ಲಿ ನೂತನವಾಗಿ ಲಕ್ಷ್ಮೀ ಮೆಡಿಕಲ್ಸ್ ಎಂಬ ಔಷಧ ಅಂಗಡಿಯನ್ನು ಆರಂಭಿಸಿದ್ದಾರೆ.
ಯೋಗ್ಯ ಬೆಲೆ ಹಾಗೂ ಪ್ರಾಮಾಣಿಕ ಸೇವೆಯನ್ನು ಗ್ರಾಹಕರಿಗೆ ಒದಗಿಸುವ ಸಂಕಲ್ಪ ಮಾಡಿರುವ ಕೇಶವ ಮೇಸ್ತರ ಮೆಡಿಕಲ್ ಶಾಪ್ಗೆ, ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ್ ಭೇಟಿ ನೀಡಿ ಶುಭ ಹಾರೈಸಿದರು.
ಗ್ರಾಹಕರನ್ನು ವ್ಯಾಪಾರದ ದೃಷ್ಟಿಯಿಂದ ಅಷ್ಟೇ ನೋಡದೆ, ಹತ್ತಿರದಲ್ಲಿ ಸಿಗದಿರುವ ಅಪರೂಪದ ಔಷಧವನ್ನೂ ಸಹ ಆರ್ಡರ್ ತಗೊಂಡು ಸಕಾಲದಲ್ಲಿ ತರಿಸಿಕೊಟ್ಟು ಆರೋಗ್ಯವಂತ ಸಮಾಜಕ್ಕೆ ಪೂರಕವಾಗಿರಿ. ಎಂದು ಸುನಿಲ್ ನಾಯ್ಕ್ ಸಲಹೆ ನೀಡಿದರು
More Stories
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು
ಕಾಡಿನಲ್ಲಿ ವಾಸಮಾಡಬೇಕಾದ ಕಡವೆ ನಾಡಿನಲ್ಲಿ ಪ್ರತ್ಯಕ್ಷ
18ನೇ ವರ್ಷಕ್ಕೆ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿದ ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ