ಕುಮುಟಾ ; ತಾಲೂಕಿನ ಹೆಗಡೆಯ ಶಿವಪುರದಲ್ಲಿರುವ ಕೂಲಿಕಾರರ ಕಷ್ಟಕ್ಕೆ ನೆರವಾದ ಮಿತ್ರಧ್ವಯರಾದ ಕುಮಟಾದ ಉದ್ಯಮಿ ಚೇತನ್ ಶೇಟ್ ಹಾಗೂ ಚಾರ್ಟರ್ಡ್ ಎಕೌಂಟೆಂಟ್ ಯೋಗೀಶ್ ಕಾಮತ
ಲಾಕ್ ಡೌನ್ ಆದಾಗಿನಿಂದ ಕೂಲಿಕಾರರ ಜೀವನ ಹೇಳತೀರದು… ಕೂಲಿ ಮಾಡಿ ಅದೇ ದಿನದ ದುಡಿಮೆ ಇಂದ ಜೀವನ ಸಾಗಿಸುತ್ತ ಇದ್ದವರು ಈಗ ಕೆಲಸವಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ ಅಂಥವರ ಪಾಲಿಗೆ ಕೆಲವರು ದೇವರಂತೆ ಕಾಣುತ್ತಾರೆ.. ಕಷ್ಟದ ಸಮಯದಲ್ಲಿ ನೆರವಾದವರನ್ನು ಮರೆಯಲು ಸಾಧ್ಯವಿಲ್ಲ.. ಹಾಗೆಯೇ ಕುಮಟಾದ ಮಹಾಲಸಾ ದ ಉದ್ಯಮಿ ಚೇತನ್ ಶೇಟ್ ಹಾಗೂ ಜಿಲ್ಲೆಯ ಪ್ರಸಿದ್ಧ ಚಾರ್ಟರ್ಡ್ ಎಕೌಂಟೆಂಟ್ ಎನಿಸಿಕೊಂಡಿರುವ ಜಿ ಎಸ್ ಕಾಮತ್ ರವರ ಸುಪುತ್ರ ಯೋಗೀಶ್ ಕಾಮತ ರವರು ಬಡವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಮನೆಯ ಅಡಿಗೆಗೆ ಬೇಕಾಗುವ ಎಲ್ಲ ಸಾಮಗ್ರಿ ಗಳನ್ನು ಒಳಗೊಂಡ ಉತ್ಯುತ್ತಮವಾದ ಕಿಟ್ ನ್ನು ಶಿವಪುರದ 60 ಮನೆಗಳಿಗೆ ವಿತರಿಸಿದರು.. ಈಗ ಭಾಗದಲ್ಲಿ ಎಲ್ಲರೂ ಕೂಡ ದಿನದ ಕೂಲಿ ಮಾಡಿ ಜೀವನ ಸಾಗಿಸುವಂಥವರು.. ಈ ಮಿತೃಧ್ವಯರ ಈ ಕಾರ್ಯಕ್ಕೆ ಉತ್ತಮ ಪ್ರಶಂಸೆ ಅಭಿನಂದನೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಗಣೇಶ ನಾಯ್ಕ, ಪ್ರಾತೇಶ ನಂಬಿಯಾರ, ಅಭಿಷೇಕ ತಲಗೇರಿ ಹಾಗೂ ಇತರರು ಉಪಸ್ಥಿತರಿದ್ದರು
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.