ಹೊನ್ನಾವರ ಪಟ್ಟಣದ ಕೊಂಕಣ ಖಾರ್ವಿ ಸಮಾಜ ಅಭಿವೃದ್ಧಿ ಸಂಘ ಕೆಳಗಿನಪಾಳ್ಯ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಪೂಜಾ ಕಾರ್ಯಕ್ರಮ ಪಟ್ಟಣದ ಕೆಳಗಿನಪಾಳ್ಯದ ಸಮಾಜ ಮಂದಿರದಲ್ಲಿ ಧಾರ್ಮಿಕ ವಿಧಿವಿಧಾನದಂತೆ ನಡೆಯಿತು.
ಸಮಾಜ ಹಾಗೂ ಊರಿನ ಅಭಿವೃದ್ದಿಗಾಗಿ 9 ವರ್ಷದಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಆಯೋಜಿಸುತ್ತಿದ್ದು, ಈ ಬಾರಿಯು ಕಳಸ ಸ್ಥಾಪನೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಪ.ಪಂ.ಅಧ್ಯಕ್ಷ ಸಮಾಜದ ಮುಖಂಡರಾದ ಶಿವರಾಜ ಮೇಸ್ತ ದಂಪತಿಗಳು ಪೂಜೆ ನೇರವೇರಿಸಿದರು.
ಈ ವೇಳೆ ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾ ಕಿಸಾನ್ ಕಾಂಗ್ರೇಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ,ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ, ನಾಗರಾಜ ನಾಯಕ ತೊರ್ಕೆ, ಪ.ಪಂ.ಸದಸ್ಯ ಸುರೇಶ ಹೊನ್ನಾವರ, ಕೊಂಕಣ ಖಾರ್ವಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
More Stories
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು
ಕಾಡಿನಲ್ಲಿ ವಾಸಮಾಡಬೇಕಾದ ಕಡವೆ ನಾಡಿನಲ್ಲಿ ಪ್ರತ್ಯಕ್ಷ
18ನೇ ವರ್ಷಕ್ಕೆ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿದ ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ