ಕುಮಟಾ: ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಶಾಂತಾ ನಾರಾಯಣ ನಾಯಕ ಇವರು 76 ನೇ ಧ್ವಜಾರೋಹಣ ನೆರವೇರಿಸಿ “ಸ್ವಾತಂತ್ರ್ಯೋತ್ಸವದ ಧ್ಯೇಯೋದ್ದೇಶಗಳನ್ನು, ಆದರ್ಶಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು”. ಗ್ರಾಮ ಪಂಚಾಯತ್ ಸದಸ್ಯರಾದ ನಾಗರತ್ನ ಗಾಂವಕರ,ವೀಣಾ ನಾಯಕ, ದೇವಾನಂದ ನಾಯಕ, ಮಾದೇವಿ ಹಳ್ಳೇರ, ಇನಾಸ್ ಫರ್ನಾಂಡೀಸ್, ರಮಾಕಾಂತ ಹರಿಕಂತ್ರ, ಮಂಗಲಾ ಹಳ್ಳೇರ, ಸವಿತಾ ಹಳ್ಳೇರ, ಮಹೇಶ ನಾಯಕ, ವೆಂಕಮ್ಮ ಹರಿಕಂತ್ರ, ಕುಸುಮಾ ಪಡ್ತಿ ಊರಿನ ನಾಗರಿಕರು ಹಾಜರಿದ್ದರು. ಹಿರೇಗುತ್ತಿ ಪ್ರಾಥಮಿಕ, ಹೈಸ್ಕೂಲ್, ಕಾಲೇಜಿನ ಶಿಕ್ಷಕ ವೃಂದದವರು ಗಣ್ಯ ವ್ಯಕ್ತಿಗಳು ಗ್ರಾಮ ಪಂಚಾಯತ್ ಸಿಬ್ಬoದಿಗಳು ಶ್ರೀ ಬ್ರಹ್ಮಜಟಕ ಯುವಕ ಸಂಘದವರು ಹಾಜರಿದ್ದರು.
ಹಿ.ಪ್ರಾ.ಶಾಲೆ ಹಿರೇಗುತ್ತಿ, ಸೆಕೆಂಡರಿ ಹೈಸ್ಕೂಲ್ ವಿದ್ಯಾಥಿಗಳು ಕಾಲೇಜ್ ವಿದ್ಯಾರ್ಥಿಗಳು ಧ್ವಜವಂದನೆ ಸಲ್ಲಿಸಿದರು. ಊರಿನೆಲ್ಲೆಡೆ ಹಬ್ಬದ ವಾತಾವರಣ ಉಂಟಾಯಿತು. ಪ್ರಾರಂಭದಲ್ಲಿ ಸೆಕೆಂಡರಿ ಹೈಸ್ಕೂಲ್ ವಿದ್ಯಾರ್ಥಿನಿ ನಾಗಶ್ರೀ ಸಂಗಡಿಗರು ಧ್ವಜಗೀತೆ ಹಾಡಿದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು.
More Stories
ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರು ಮರಳಿ ಕಾಂಗ್ರೆಸ್ಗೆ ಸೇರ್ಪಡೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!