May 3, 2024

Bhavana Tv

Its Your Channel

ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ಹೊನ್ನಾವರ ; ಪ್ರಕೃತಿ ವಿಕೋಪ ಸಮಯದಲ್ಲಿ ಗ್ರಾಮೀಣ ಭಾಗಕ್ಕೆ ಜಿಲ್ಲೆ ಹಾಗೂ ತಾಲೂಕ ಕೇಂದ್ರದಿ0ದ ನೆರವು ಆಗಲು ವಿಳಂಬವಾದರೂ ತಕ್ಷಣ ಸ್ಥಳೀಯ ಮಟ್ಟದಿಂದ ನೆರವು ಸಿಗಲು ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡ ಸಹಕಾರಿಯಾಗಲಿದೆ ಎಂದು ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಅಭಿಪ್ರಾಯಪಟ್ಟರು.
ಹೊನ್ನಾವರ ಪಟ್ಟಣದ ಎಸ್.ಡಿ.ಎಂ.ಕಾಲೇಜಿನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ರಾಜ್ಯದ ಆರು ಕೋಟಿಯಲ್ಲಿ ಎರಡು ಕೋಟಿ ಜನರಿಗೆ ವಿವಿಧ ರೀತಿಯಲ್ಲಿ ನೆರವಾಗಿದೆ. ನಾವು ಹೇಗೆ ಸಮಾಜಕ್ಕೆ ನೆರವಾಗಬಹುದು ಎನ್ನುವುದಕ್ಕೆ ಗ್ರಾಮಾಭಿವೃದ್ದಿ ಯೋಜನೆಯ ಹಲವು ಕಾರ್ಯಕ್ರಮದ ಮೂಲಕ ಡಾ. ವಿರೇಂದ್ರ ಹೆಗ್ಗಡೆಯವರು ತೋರಿಸುತ್ತಾ ಬಂದಿದ್ದಾರೆ. ತಾಲೂಕಿನಲ್ಲಿ ಸಮುದ್ರದಿಂದ ಕಡಲ್ಕೋರೆತ, ಲಿಂಗನಮಕ್ಕಿ ಡ್ಯಾಂ ಭರ್ತಿಯಾಗಿ ಬರುವ ನೀರು, ಗುಂಡಬಾಳ ನದಿ ನೀರಿನ ಅಪಾಯ ದಶಕಗಳಿಂದ ಶರಾವತಿ ಎಡಬಲ ದಂಡೆ, ಕರ್ಕಿ ಕಾಸರಕೋಡ ಭಾಗದಲ್ಲಿ ಹಾಗಾಗಿ ಸಂಭವಿಸುತ್ತಿದೆ. ಇಂತಹ ಸಮಯದಲ್ಲಿ ಈ ತಂಡವು ಕಳೆದ ಮೂರು ವರ್ಷದಿಂದ ನೆರವಾಗುತ್ತಿದೆ. ಕಳೆದೆರಡು ವರ್ಷದ ಹಿಂದೆ ಕೋವಿಡ್ ಸಮಯದಲ್ಲಿ ಅಂಬುಲೆನ್ಸ ನೀಡಿ ತಾಲೂಕಿನ ಜನತೆಗೆ ಯೋಜನೆಯಿಂದ ಅನೂಕೂಲವಾಗಿದೆ ಎಂದು ಸ್ಮರಿಸಿದರು.

ತಾಲೂಕ ಮಟ್ಟದ ಸಾಧಕ ತಂಡಗಳಿಗೆ ಪ್ರಶಸ್ತ್ರಿ ವಿತರಿಸಿ ಗೌರವಿಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ ವಿವೇಕ ವಿ ಪಾಯಸ್ ಮಾತನಾಡಿ ಜಿಲ್ಲೆಯ ಕಾರವಾರದಿಂದ ನೆರೆಯ ಮಂಗಳೂರಿನವರೆಗೆ ಕಡಲತೀರದಲ್ಲಿ ಸಮುದ್ರದಲ್ಲಿ ಹಲವು ಅಪಾಯವನ್ನುಂಟು ಮಾಡುತ್ತಿದೆ. ಹೆದ್ದಾರಿಯಲ್ಲಿ ದಿನನಿತ್ಯ ಅಪಘಾತಗಳಿಂದ ಮನುಷ್ಯರು ಪ್ರಾಣಿಗಳು ಸಾವನ್ನು ಅನುಭವಿಸುತ್ತಿದ್ದಾರೆ. ಇಲ್ಲಿ ಸಂಭವಿಸುಬ ವಿಪತ್ತು ಯಾರನ್ನು ಬಿಡುವುದಿಲ್ಲ. ನಾವೆಲ್ಲರು ಈ ಸಮಯದಲ್ಲಿ ಹೆಚ್ಚಿನ ಅನಾಹುತ ಸಂಭವಿಸದ0ತೆ ಜಾಗೃತವಾಗಬೇಕಿದೆ. ಈ ಸಮಯದಲ್ಲಿ ಗ್ರಾಮಾಭಿವೃದ್ದಿ ಯೋಜನೆ ೭೪ ತಾಲೂಕಿನಲ್ಲಿ ಹತ್ತು ಸಾವಿರ ಸ್ವಯಂ ಸೇವಕರನ್ನು ಸಿದ್ದ ಮಾಡಿ ಪ್ರಕೃತಿ ವಿಕೋಪದ ಸಮಯದಲ್ಲಿ ನೆರವಾಗಲು ಸಿದ್ದಪಡಿಸಲಾಗುತ್ತಿದೆ. ಈ ತಾಲೂಕಿನ ಆಪ್ತ ಕಾಲದಲ್ಲಿ ಆಪ್ತರಕ್ಷಕರಾಗಿ ಸೇವೆ ಸಲ್ಲಿಸುವಂತೆ ಸೂಚಿಸಿದರು. ಅಪಾಯದ ನೆರೆಕೆರೆಯ ರಾಷ್ಟ್ರದ ಮಧ್ಯೆ ನಮ್ಮ ದೇಶವಿದ್ದು ನಮಗೆ ಅಪಾಯವನ್ನುಂಟು ಮಾಡುತ್ತಿದೆ. ನಮ್ಮಲ್ಲಿಯ ಯುವಸಮುದಾಯವನ್ನು ಡ್ರಗ್ಸ ದಾಸರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಯೋಜನೆಯು ಸ್ವಾಸ್ಥ್ಯ ಸಂಕಲ್ಪದAತಹ ಕಾರ್ಯಕ್ರಮ ನಡೆಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯೆ ವಿಜಯಲಕ್ಷ್ಮಿ ನಾಯ್ಕ ಆಪತ್ತು ಹಾಗೂ ವಿಪತ್ತು ಆಕಸ್ಮಿಕವಾಗಿ ಬರಲಿದ್ದು, ಅಂತಹ ಸಮಯದಲ್ಲಿ ನಿಮ್ಮ ಜೀವನವನ್ನು ಪಣಕಿಟ್ಟು ನೆರವಾಗುವ ಕಾರ್ಯ ಮಾದರಿಯಾಗಿದೆ. ಹೆಚ್ಚಿನ ಸದಸ್ಯರು ಈ ತಂಡದಲ್ಲಿ ಸೆರ್ಪಡೆಯಾಗಿ ಇನ್ನಷ್ಟು ಸಮಾಜಮುಖಿ ಕಾರ್ಯ ನಡೆಯಲಿ ಎಂದು ಶುಭ ಹಾರೈಸಿದರು.
ಪೋಲೀಸ್ ಠಾಣಿಯ ಎ.ಎಸೈ ಸುಶಾಂತ, ಅಗ್ನಿಶಾಮಕ ಠಾಣಿಯ ರಾಘವೇಂದ್ರ ಪಟಗಾರ, ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ ಆಚಾರ್ಯ,ಶೌರ್ಯ ವಿಪತ್ತು ನಿರ್ವಹಣೆ ಪಡೆಯ ಯೋಜನಾಧಿಕಾರಿ ಜೈವಂತ ಪಟಗಾರ ಯೋಜನೆಯ ಕಾರ್ಯಕರ್ತರು, ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಸದಸ್ಯರು ಹಾಜರಿದ್ದರು. ತಾಲೂಕ ಯೋಜನಾಧಿಕಾರಿ ವಾಸಂತಿ ಅಮೀನ್ ಸ್ವಾಗತಿಸಿ, ಮೇಲ್ವಿಚಾರಕರಾದ ಉದಯ ವಂದಿಸಿ, ನಾಗರಾಜ ಕೆ ನಿರ್ವಹಿಸಿದರು.

error: