ಪುತ್ತೂರು: ಉದ್ಯಮಿ, ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಅಂಗರಕ್ಷಣೆಯ ಉಸ್ತುವಾರಿ ಹೊತ್ತಿದ್ದ, ಬೆಂಗಳೂರು ನಗರ ಜಯಕರ್ನಾಟಕ ಜಿಲ್ಲಾ ಉಪಾಧ್ಯಕ್ಷ ಬೇಕೂರು ಪ್ರವೀಣ್ ಚಂದ್ರ ಶೆಟ್ಟಿ ಮಾರಕ ಕ್ಯಾನ್ಸರ್ ಖಾಯಿಲೆಯಿಂದ ನಿಧನರಾಗಿದ್ಧಾರೆ.
ಮುತ್ತಪ್ಪ ರೈ ಭೂಗತ ಲೋಕದಿಂದ ಹೊರಗೆ ಬಂದ ನಂತರ ಬೊಲ್ಲಾರ್ ಪ್ರವೀಣಚಂದ್ರ ಶೆಟ್ಟಿ ಬೇಕೂರು ಅವರ ಅಂಗರಕ್ಷಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು.
ಮುತ್ತಪ್ಪ ರೈಗಳು ಇತ್ತೀಚಿಗೆ ಕ್ಯಾನ್ಸರ್ ಖಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರಿಗಿಂತ ಮೊದಲೇ ಪ್ರವೀಣಚಂದ್ರ ಶೆಟ್ಟಿಯವರಿಗೆ ಕ್ಯಾನ್ಸರ್ ಖಾಯಿಲೆ ಕಂಡುಬಂದಿತು.
ಪ್ರವೀಣಚಂದ್ರ ಶೆಟ್ಟಿಯವರು ಕೂಡ ಮುತ್ತಪ್ಪ ರೈಯವರಂತೆ ಕೇರಳದ ವಯನಾಡಿನಿಂದ ಕ್ಯಾನ್ಸರ್ ಗೆ ಆಯುರ್ವೇದಿಕ್ ಔಷಧಿ ಪಡೆಯುತ್ತಿದ್ದರು. ಆದರೆ ಲಾಕ್ ಡೌನ್ ಸಂದರ್ಭ ಆ ಔಷಧಿ ಸಿಗುತ್ತಿರಲಿಲ್ಲ ಎಂದು ಆಪ್ತ ವಲಯ ತಿಳಿಸಿದೆ.
ಮುತ್ತಪ್ಪ ರೈಯವರ ಬಲಗೈ ಬಂಟರಾಗಿ, ಅವರ ಅಂಗರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡು, ಜಯಕರ್ನಾಟಕ ಸಂಘಟನೆಯಲ್ಲಿ ತೊಡಗಿಕೊಂಡು ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಪ್ರವೀಣ್ ಚಂದ್ರ ಶೆಟ್ಟಿ ಬೇಕೂರುರವರು ಪತ್ನಿ ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ
More Stories
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತಿ ಸಂಗೀತ
ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ
ವಿಜೃಂಭಣೆಯಿoದ ನಡೆದ ಶ್ರೀ ಶಾರದಾ ಶತಮಾನೋತ್ಸವ