
ಇಲಕಲ್ಲ ನಗರದಲ್ಲಿ ಐ.ಎಂ.ಎ. ಡಾಕ್ಟರ್ಸ್ ಸಹಯೋಗದಲ್ಲಿ ನಗರ ಪೊಲೀಸ ಠಾಣೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪೋಲೀಸ್ ಠಾಣಾ ಸಿಬ್ಬಂದಿ, ನಗರಸಭೆ , ಕಂದಾಯಯ ಇಲಾಖೆ ಸಿಬ್ಬಂದಿಗಳನ್ನು ಕಳೆದ ಎರಡು ದಿನಗಳಹಿಂದೆ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಅದರಂತೆ ದಿನನಿತ್ಯ ನೂರಾರು ಜನರೊಂದಿಗೆ ವಹಿವಾಟು ನಡೆಸುತ್ತಿರುವ ಕಿರಾಣಿ ವ್ಯಾಪಾರಸ್ಥರನ್ನು ಮತ್ತು ಪತ್ರಕರ್ತರಿಗಾಗಿ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಮಾತನಾಡಿದ ಇಲಕಲ್ಲ ಐ.ಎಂ.ಎ ಅಧ್ಯಕ್ಷ ಡಾ|| ವಿಠ್ಠಲ ಶ್ಯಾವಿ ತಮ್ಮ ಅಭಿಪ್ರಾಯ ಹಂಚಿಕೊoಡರು. ಐ.ಎಂ.ಎ. ವೈದ್ಯರೆಲ್ಲ ಸೇರಿದಂತೆ ಅನೇಕ ಆರೋಗ್ಯ ಸಿಬ್ಬಂದಿಗಳು ಅರೋಗ್ಯ ತಪಾಸಣೆ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಇಲಕಲ್ಲ ವೈದ್ಯರಿಗೆ ಕಿರಾಣಿ ವ್ಯಾಪಾರಸ್ಥರು ಹಾಗೂ ಪತ್ರಕರ್ತರು ಶ್ಲಾಘನೆ ವ್ಯಕ್ತಪಡಿಸಿದರು.
More Stories
ಡಾ || ಪುನೀತ್ ರಾಜಕುಮಾರ್ ಜನ್ಮದಿನ ಆಚರಣೆ
ಡಾ. ಸುಭಾಷ್ ಹೋಟಿ ಅವರಿಗೆ “ಪದ್ಮಭೂಷಣ ಡಾ. ವಿ ಪಿ ಶರ್ಮಾ” ಪ್ರಶಸ್ತಿ ಪ್ರದಾನ
ಕರ್ನಾಟಕದ ಸಮಗ್ರ ಅಭಿವೃದ್ಧಿಯೆ ಬಿಜೆಪಿ ಗುರಿ: ಬಿ ಎಸ್ ಯಡಿಯೂರಪ್ಪ