March 29, 2024

Bhavana Tv

Its Your Channel

ಸ್ಪರ್ಧಾತ್ಮಕ ಯುಗದಲ್ಲಿ ದೃಢಸಂಕಲ್ಪ ಅತ್ಯವಶ್ಯಕ- ಡಾ. ಹಂಗರಗಿ

ಬಾಗಲಕೋಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದೃಢ ಸಂಕಲ್ಪದಿAದ ಅಧ್ಯಯನ ಶೀಲರಾಗಬೇಕೆಂದು ಎಸ್.ಆರ್.ಎನ್. ಹಾಗೂ ಎಂ.ಬಿ.ಎಸ್. ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಎಸ್.ಎಸ್. ಹಂಗರಗಿ ವಿದ್ಯಾರ್ಥಿಗಳಿಗೆ ಹೇಳಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಬಿ.ಎ. ಮತ್ತು ಬಿಕಾಂ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ದೃಢಸಂಕಲ್ಪ, ಅಚಲ ಶ್ರದ್ಧೆಯಿಂದ ಅಧ್ಯಯನ ಮಾಡಿದರೇ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಂಘದ ಅಧ್ಯಕ್ಷರಾದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಸಂಘದ ಸಹ ಕಾರ್ಯದರ್ಶಿ ವಿದ್ಯಾಧರ ಮಳ್ಳಿ ವಹಿಸಿದ್ದರು. ಸಂಘದ ಕಾರ್ಯದರ್ಶಿ ಬಸವರಾಜ ಕುಮಚಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅನೀಲಕುಮಾರ ಕಲ್ಯಾಣಶೆಟ್ಟಿ, ಪ್ರೊ. ಎಂ.ಎA.ಲಾಯದಗುAದಿ, ಪ್ರೊ. ಎಂ.ಎಸ್.ಶೆಟ್ಟರ, ಪ್ರಾಚಾರ್ಯರಾದ ಪ್ರೊ. ಪಿ.ಎಂ.ಗುರುವಿನಮಠ, ಸಂಘದ ಆಡಳಿತ ಮಂಡಳಿಯ ಸರ್ವ ಸದಸ್ಯರು, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕು. ಲಕ್ಷ್ಮೀ ಭಾವಿ ಸೇರಿದಂತೆ ಮಹಾವಿದ್ಯಾಲಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕೆ.ಜಿ.ಅಂಗಡಿ ಹಾಗೂ ವೈ.ಎಚ್.ಕಂಬಳಿ ನಿರೂಪಿಸಿದರು. ಎಂ.ಎಸ್.ಶೆಟ್ಟರ ವಂದಿಸಿದರು.

ವರದಿ:ನಿoಗಪ್ಪ ಕಡ್ಲಿಮಟ್ಟಿ

error: