April 29, 2024

Bhavana Tv

Its Your Channel

ಇಳಕಲ್ ನಗರ ಪಿಎಸ್‌ಐ ಎಸ್. ಬಿ. ಪಾಟೀಲರು ಸಾರ್ವಜನಿಕರಿಗೆ ಹೂಗುಚ್ಛ ನೀಡಿ ಹೊರಗೆ ಬರದಂತೆ ಮನವಿ.

ಇಳಕಲ ; ಕುರೋನಾ ರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಹೀಗಾಗಿ ಪೊಲೀಸರು ವಿಭಿನ್ನ ರೀತಿಯಲ್ಲಿ ಜನರು ಹೊರಗಡೆ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ .
ಹೀಗಾಗಿ ವಿಶೇಷ ರೀತಿಯಲ್ಲಿ ಸಾರ್ವಜನಿಕರು ಹೊರಗೆ ಬರದಂತೆ ಇಳಕಲ್ ನಗರ ಪಿಎಸ್‌ಐ ಎಸ್ ಬಿ ಪಾಟೀಲ್ ಹೂಗುಚ್ಛ ಹಾಗೂ ಮಾಸ್ಕ್ ವಿತರಣೆ ಮಾಡುವ ಮೂಲಕ ಸಾರ್ವಜನಿಕರಿಗೆ ವಿನಮ್ರ ಮನವಿ ಮಾಡಿಕೊಂಡರು.
ಬೆಳ್ಳAಬೆಳಿಗ್ಗೆಯೇ ಬೀದಿಬದಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಕೈಮುಗಿದು ಹೇಳುತ್ತೇವೆ ದಯವಿಟ್ಟು ಹೊರಗಡೆ ಬರಬಾರದು ಎಂದು ಮನವಿ ಮಾಡಿಕೊಂಡರು.

ಕೇವಲ ಲಾಠಿ ಏಟಿನ ಮೂಲಕ ಮಾತ್ರ ಜನರನ್ನು ನಿಯಂತ್ರಿಸುವುದು ಮಾತ್ರ ಅಲ್ಲ ಈ ರೀತಿ ವಿಭಿನ್ನ ರೀತಿಯಲ್ಲಿ ಜನರಿಗೆ ಮನವಿ ಮಾಡಿಕೊಂಡ ಇಳಕಲ್ ನಗರ ಎಸ್ ಬಿ ಪಾಟೀಲ ಅವರ ಕಾರ್ಯ ಇಳಕಲ್ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವರದಿ. ವಿನೋದ ಬಾರಿಗಿಡದ ಇಳಕಲ್

error: