ಬೆಂಗಳೂರು :ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು ಇದರ ವತಿಯಿಂದ ಸಂಘದ ಸದಸ್ಯರುಗಳಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ.
ರಾಮ ಕೃಷ್ಣಪ್ಪ ಕೇಂದ್ರ ಕಛೇರಿ ಸಿಬ್ಬಂದಿಯವರು ವಯೋ ನಿವೃತ್ತಿಹೊಂದಿದ್ದು ಅವರ ಸುಧೀರ್ಘ ೪೪ ವರ್ಷಗಳ ಸೇವೆಯನ್ನು ಸ್ಮರಿಸಿ ಕೇಂದ್ರ ಸಮಿತಿ ವತಿಯಿಂದ ಗೌರವ ಸಲ್ಲಿಸಿ, ಸಂಘದ ಬೈಲಾ ಪ್ರಕಾರ ಭತ್ಯೆ ನೀಡಿ ಆತ್ಮೀಯವಾಗಿ ಬಿಳ್ಕೋಡಲಾಯಿತು. ಹೆಚ್ ವಿ ಚಂದ್ರಬಾಬು ಪ್ರಧಾನ ಕಾರ್ಯದರ್ಶಿಗಳು ರೂ ೧೦,೦೦೦/- ಗಳನ್ನು ವೈಯಕ್ತಿಕ ವಾಗಿ ತಮ್ಮ ಕಡೆಯಿಂದ ನೀಡಿ ಮಾತನಾಡಿ ರಾಮಕೃಷ್ಣರವರ ಮುಂದಿನ ವಿಶ್ರಾಂತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಸಂದರ್ಭದಲ್ಲಿ ಕೆ ಚಂದ್ರಬಾಬು ಕೋಶಾಧ್ಯಕ್ಷರು, ಪುಟ್ಟಯ್ಯ ಛೇರ್ಮನ್ ವಿಚಾರಣಾ ಸಮಿತಿ, ಸಮಿಉಲ್ಲಾ ವೈಸ್ ಛೇರ್ಮನ್ ವಿಚಾರಣಾ ಸಮಿತಿ, ವೇಣುಗೋಪಾಲ ಮದ್ಗುಣಿ ಛೇರ್ಮನ್ ಕನ್ನಡ ಕ್ರಿಯಾ ಸಮಿತಿ ಹಾಗೂ ಸದಸ್ಯರು ಸಂಘದ ಸಿಬ್ಬಂದಿಗಳು ಹಾಜರಿದ್ದರೆಂದು ಛೇರ್ಮನ್ ರಾಜ್ಯ ಪ್ರಚಾರ ಸಮಿತಿಯ ಯದುಕುಮಾರವರು ಆರ್ ಎ ನವರು ತಿಳಿಸಿದ್ದಾರೆ.
More Stories
ಭಾರತೀಯ ಜನತಾ ಪಾರ್ಟಿಯ ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಹ-ಸಂಚಾಲಕರನ್ನಾಗಿ ಕೆ.ಆರ್. ವೆಂಕಟೇಶ್ಗೌಡ, ಬೆಂಗಳೂರು, ನೇಮಕ
ಸುವರ್ಣ ಸಾಧಕ ಪ್ರಶಸ್ತಿ ಸ್ವೀಕರಿಸಿದ ಅನಂತಮೂರ್ತಿ ಹೆಗಡೆ
ನ್ಯಾಷನಲ್ ಎಜುಕೇಷನ್ ಸೊಸೈಟಿಯಿಂದ ಡಿ 8 ಮತ್ತು 9 ರಂದು ಎನ್.ಇ.ಎಸ್ ಸೂಪರ್ ನೋವಾ ಒಂದು ಶೈಕ್ಷಣಿಕ ಮೇಳ