May 1, 2024

Bhavana Tv

Its Your Channel

ನೀರಿಲ್ಲದ ಬಾವಿಯಲ್ಲಿ ಬಿದ್ದ ಆಕಳನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಸಂಜು ಅಪ್ಪಾಸಾಬ್ ಸಾಳುಂಕೆ ಎಂಬುವವರ ಆಕಳು ಮೇಯಲು ಹೋಗಿ ಕಾಲು ಜಾರಿ ಬಿದ್ದಿರುವ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ. ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದ ತಕ್ಷಣ ಸ್ಥಳಕ್ಕೆ ಜಲವಾಹನ ಹಾಗೂ ಸಿಬ್ಬಂದಿಯವರೊಂದಿಗೆ ಘಟನಾ ಸ್ಥಳಕ್ಕೆ ಇ0ದರು. ಅಂದಾಜು 4 ಎಕರೆ 10 ಗುಂಟೆಯ ಹೊಲದಲ್ಲಿರುವ ತೆರೆದ ನೀರಿಲ್ಲದ ಬಾವಿಯಲ್ಲಿ ಅಂದಾಜು 55 ರಿಂದ 60 ಅಡಿ ಆಳದಲ್ಲಿ ಆಕಳು ಕಾಲು ಜಾರಿ ಬಿದ್ದಿರುವುದನ್ನು ಗಮನಿಸಿ ಆಕಳನ್ನು ಸುಮಾರು 1 ಗಂಟೆ 55 ನಿಮಿಷಗಳ ಕಾಲ ಕಷ್ಟಕರ ಕಾರ್ಯಚರಣೆ ಮಾಡಿ ಬಾವಿಯಿಂದ ಸುರಕ್ಷಿತವಾಗಿ ಮೇಲಕ್ಕೆತ್ತಲಾಗಿದೆ

ರಕ್ಷಣಾ ಕಾರ್ಯಚರಣೆಯಲ್ಲಿ ಮಹಾಂತಪ್ಪ ಬಿರಾದರ್ , ಪ್ರಶಾಂತ್ ಚವಾಣ್ , ಆಸಿಫ್ ಅಹಮದ್ ಸನದಿ, ಪ್ರಕಾಶ್ ಆಲಿಶೆಟ್ಟಿ , ಸಂಜೀವ್ ಚೌಗಲಾ , ಸಂತೋಷ್ ಚೌಗಲಾ ಇತರರು ಮತ್ತು ಊರಿನ ಗ್ರಾಮಸ್ಥರು ಇದ್ದರು

error: