May 1, 2024

Bhavana Tv

Its Your Channel

ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಶಶಿರೇಖಾ ರವರು ಮಾತನಾಡಿ ಮಕ್ಕಳಿಗೆ ಸಿರಿಧಾನ್ಯ ಹಾಗೂ ತರಕಾರಿ ಸೊಪ್ಪುಗಳ ಬಳಕೆಯಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಉಪಯೋಗ ಇದೆ ಎಂದರೆ ನಮ್ಮ ಆರೋಗ್ಯಕ್ಕೆ ಉತ್ತಮ ಪ್ರೊಟೀನ್ ಅಂಶ ಸಿಗಬೇಕಾದರೆ ದ್ವಿದಳ ಧಾನ್ಯಗಳ ಕಾಳುಗಳನ್ನು ಉಪಯೋಗಿಸಿದರೆ ಮಾತ್ರ ನಮ್ಮ ಶರೀರಕ್ಕೆ ಒಳ್ಳೆಯ ಪ್ರೊಟೀನ್ ಮತ್ತು ವಿಟಮಿನ್ ಅಂಶಗಳು ಸೇರುತ್ತವೆ ಹಾಗಾಗಿ ಪೋಷಣಾ ಅಭಿಯಾನದ ಮೂಲಕ ಆರೋಗ್ಯದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ನಟರಾಜು ,ಎಚ್ ಎಂ, ಸ್ಥಳೀಯ ವೈದ್ಯಾಧಿಕಾರಿ ಯಾದ ಡಾಕ್ಟರ್ ಶಶಿರೇಖಾ, ಶಾಲಾ ಮುಖ್ಯ ಶಿಕ್ಷಕರಾ ದ ಕೆ ಎನ್. ಶಿವಸ್ವಾಮಿ, ಸಹ ಶಿಕ್ಷಕರಾದ ಮಹೇಶ್ ವಿದ್ಯಾರ್ಥಿಗಳು ಅಂಗನವಾಡಿ ಸಿಬ್ಬಂದಿ ವರ್ಗದವರು ಮತ್ತು ಪೋಷಕರು ಹಾಜರಿದ್ದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಸದಾನ೦ದ ಕನ್ನೆಗಾಲ ಗುಂಡ್ಲುಪೇಟೆ

error: