May 11, 2024

Bhavana Tv

Its Your Channel

ಕರ್ನಾಟಕ ಕಾವಲು ಪಡೆ ವತಿಯಿಂದ ಪಟ್ಟಣದ ಪೊಲೀಸ್ ಇಲಾಖೆಗೆ ಮನವಿ

ಗುಂಡ್ಲುಪೇಟೆ :- ಕರ್ನಾಟಕ ಕಾವಲು ಪಡೆಯವತಿಯಿಂದ ಗುಂಡ್ಲುಪೇಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಹಾಗೂ ಎಂ.ಡಿ.ಸಿ.ಸಿ.ಬ್ಯಾAಕ್ ಮುಂಭಾಗ ಪೋಲಿಸ್ ಚೌಕಿ ಅಳವಡಿಸಿ ಹಾಗೂ ಪೋಲಿಸ್ ಸಿಬ್ಬಂದಿಯನ್ನು ನೇಮಕ ಮಾಡಿ ಪಟ್ಟಣದಲ್ಲಿ ಆಗುತ್ತಿರುವ ಅಪಘಾಗಳನ್ನು ತಡೆಗಟ್ಟಬೇಕೆಂದು ಪಟ್ಟಣದ ಆರಕ್ಷಕ ಇಲಾಖೆಯ ನಿರೀಕ್ಷಕರಾದ ಮುದ್ದುರಾಜ್ ರವರಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾವಲು ಪಡೆಯ ತಾಲೂಕಾ ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಸಾರಿಗೆ ನಿಲ್ದಾಣದ ಮುಂಭಾಗ ಕೇರಳ ರಾಜ್ಯದ ಬಸ್ಸುಗಳು ನಿಲ್ದಾಣದ ಒಳಗೆ ಬರದೇ ರಸ್ತೆಯ ಮದ್ಯದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವುದು ಹಾಗೂ ಹತ್ತಿಸುವುದರಿಂದ ಟ್ರಾಫಿಕ್ ಜಾಮ್ ಆಗಿ ಚಲಿಸುವ ಇತರೆ ವಾಹನಗಳಿಗೆ ತುಂಬಾ ತೊಂದರೆಯಾಗುತ್ತಿದೆ ಇದರ ಬಗ್ಗೆ ಕ್ರಮ ವಹಿಸುವಂತೆ ಒತ್ತಾಯಿಸಿದರು

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷರಾದ ಅಮೀರ್. ಜಿಲ್ಲಾ ಕಾರ್ಯಧ್ಯಕ್ಷರಾದ ಅಬ್ದುಲ್ ರಷೀದ್, ತಾಲೂಕಾ ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡರು. ತಾಲೂಕಾ ಕಾರ್ಯದರ್ಶಿಗಳಾದ ಎಸ್.ಮುಬಾರಕ್. ತಾಲೂಕಾ ಕಾರ್ಯಧ್ಯಕ್ಷರಾದ ಇಲಿಯಾಸ್. ಟೌನ್ ಉಪಾಧ್ಯಕ್ಷರಾದ ಸಾದಿಕ್ ಪಾಷ.ಟೌನ್ ಗೌರವಾಧ್ಯಕ್ಷರಾದ ಶಕೀಲ್. ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ಹೆಚ್.ರಾಜು.ಸಂಚಾಲಕರಾದ ಮಿಮಿಕ್ರಿರಾಜು. ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: