May 12, 2024

Bhavana Tv

Its Your Channel

ಮಲ್ಲಿಕಾರ್ಜುನ ಖರ್ಗೆ ಪದಗ್ರಹಣ ಮಾಡಿರುವ ಹಿನ್ನೆಲೆ ಗುಂಡ್ಲುಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಿ ಪಟಾಕಿ ಸಿಡಿಸಿ ಸಿಹಿ ವಿತರಣೆ

ಗುಂಡ್ಲುಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ .ಐ .ಸಿ .ಸಿ. ಅಧ್ಯಕ್ಷ ರಾಗಿ ಮಲ್ಲಿಕಾರ್ಜುನ ಖರ್ಗೆ ಪದಗ್ರಹಣ ಮಾಡಿರುವ ಹಿನ್ನೆಲೆಯಲ್ಲಿ ಗಣೇಶ್ ಪ್ರಸಾದ್ ರವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಹೆಚ್ ಎಂ ಗಣೇಶ್ ಪ್ರಸಾದ್ ಮಾತನಾಡಿ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರು ಸತತವಾಗಿ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಖರ್ಗೆ ಅವರು ಕಾರ್ಯಕರ್ತರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, 7 ಬಾರಿ ಶಾಸಕರಾಗಿ ,ಸಚಿವರಾಗಿ ಸಂಸದರಾಗಿ ಒಳ್ಳೆಯ ಅನುಭವವುಳ್ಳ ಧೀಮಂತ ರಾಜಕಾರಣಿ ಹಾಗಾಗಿ ಪಕ್ಷದ ಮುಖಂಡ ರೂಟ್ಟಿಗೆ ಸೇರಿ ಅವರನ್ನು ಅಭಿನಂದಿಸೋಣ ಎಂದರು.

ಈ ಸಂದರ್ಭದಲ್ಲಿ ಮಾಜಿ ಕಾಡ ಅಧ್ಯಕ್ಷ ನಂಜ ಪ್ಪ, ಚಾಮುಲ್ ನಿರ್ದೇಶಕ ನಂಜುAಡ ಪ್ರಸಾದ್,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ನವೀನ್ , ಚೆನ್ನಪ್ಪ, ಕಬ್ಬಳ್ಳಿ ಮಹೇಶ್, ಎಪಿಎಂಸಿ ಸದಸ್ಯಆರ್ ಎಸ್ ನಾಗರಾಜು, ಜಿಕೆ ಲೋಕೇಶ್, ಬಿ ಎಂ ಮಂಜಪ್ಪ, ನವೀನ್, ಗುರುಪ್ರಸಾದ್ ,ಮನಿ, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಸದಾ ನಂದ ಕನ್ನೆಗಾಲ

error: