May 17, 2024

Bhavana Tv

Its Your Channel

ರಾಷ್ಟ್ರೀಯ ಪಕ್ಷ ಗಳನ್ನು ತೊರೆದು ಪ್ರಾದೇಶಿಕ ಪಕ್ಷಕ್ಕೆ ಮುಖ ಮಾಡಿದ ಕೂತನೂರು ಗ್ರಾಮಸ್ಥರು

ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮದಲ್ಲಿ ಸುಮಾರು 120ಕ್ಕೂ ಹೆಚ್ಚು ಮಂದಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ತೊರೆದು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷಕ್ಕೆ ಕಡಬೂರು ಮಂಜುನಾಥ್ ರವರ ನೇತೃತ್ವದಲ್ಲಿ ಸೇರ್ಪಡೆಯಾದರು.

ಜೆಡಿಎಸ್ ಪಕ್ಷದ ಅಭ್ಯರ್ಥಿ ಕಡಬೂರು ಮಂಜುನಾಥ್ ಮಾತನಾಡಿ ರೈತರ ಬಗ್ಗೆ ಕಾಳಜಿ ಇರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಈ ಬಾರಿ ಮುಖ್ಯಮಂತ್ರಿ ಮಾಡಲು ಮತ್ತು ಅವರ ಕೈ ಬಲಪಡಿಸಲು ನಾವು ನೀವು ಒಟ್ಟಿಗೆ ದುಡಿಯೋಣ ಸಮಾಜದಲ್ಲಿ ಬದುಕುವ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಮತ್ತು ರೈತರಿಗೆ ವಿಶೇಷವಾಗಿ ಪ್ಯಾಕೇಜ್ ಗಳನ್ನು ನೀಡುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರ ಸೇವೆ ಅನನ್ಯ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ನ ಮುಖಂಡರುಗಳಾದ, ಕಗ್ಗಳದ ಹುಂಡಿ ಗಂಗಾಧರಪ್ಪ, ಬೆಳವಾಡಿ ಮಂಜುನಾಥ್, ಹುಲಸಗುಂದಿ ಮುತ್ತಣ್ಣ, ಕಂದೇಗಾಲ ಪ್ರಸಾದ್, ಮಾಡ್ರಳ್ಳಿ ಮಹದೇವಪ್ಪ, ಹೊಸೂರು ಮಹೇಶ್, ಕಂದೇಗಾಲ ಪ್ರದೀಪ್, ಕಂದೇಗಾಲದ ಶಿವಮೂರ್ತಿ, ಸುಮನ್ ,ಗಿರೀಶ್ ,ಜೆಡಿಎಸ್ ವಕ್ತಾರರಾದ ಟಿಪ್ಪು, ಕೂತನೂರು ಗ್ರಾಮದ ಸಿದ್ಧ ಶೆಟ್ಟಿ,ದೋಣಿ, ಅರಸ ಶೆಟ್ಟಿ ಬಸವಶೆಟ್ಟಿ ,ಗೋಪಾಲ ಶೆಟ್ಟಿ ಮುದ್ಧಶೆಟ್ಟಿ, ಭಾಚಹಳ್ಳಿ ಮಣಿ ಹಾಗೂ ಗ್ರಾಮದ ಮುಖಂಡರುಗಳು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: