May 2, 2024

Bhavana Tv

Its Your Channel

ರವಿವಾರ ಶ್ರೀ ರಾಘವೇಂದ್ರ ಸ್ವಾಮಿಗಳ 428 ನೇ ವರ್ಧಂತಿ ಮಹೋತ್ಸವ

ಗುಂಡ್ಲುಪೇಟೆ: ರವಿವಾರ (26-02-2023) ಗುಂಡ್ಲುಪೇಟೆ ಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 428 ನೇ ವರ್ಧಂತಿ ಮಹೋತ್ಸವದ ಪ್ರಯುಕ್ತ ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ರಥೋತ್ಸವ, ಮಹಾಮಂಗಳಾರತಿ ಹಾಗೂ ಮಧ್ಯಾಹ್ನ 12 ಕ್ಕೆ ಮೈಸೂರಿನ ಹೆಸರಾಂತ ಸಂಗೀತ ವಿದೂಷಿ ಶ್ರೀಮತಿ ಇಂದ್ರಾಣಿ ಅನಂತರಾಮ್ ರವರಿಂದ ದೇವರನಾಮಗಳ ಗಾನಾಮೃತ ನಂತರ 1-00ಗಂಟೆಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಿಯುಗದ ಕಲ್ಪವೃಕ್ಷ ಕಾಮಧೇನು ಶ್ರೀ ಗುರು ರಾಯರ ಜನ್ಮದಿನೋತ್ಸವವನ್ನು ಸಂಭ್ರಮವನ್ನು ಆಚರಿಸಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮತಿ ರಾಜೇಶ್ವರಿ ಚಂದ್ರಶೇಖರ್ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾಬೃಂದಾವನ ಸನ್ನಿಧಾನ ಸಂಸ್ಥಾಪಕರು ಹಾಗೂ ಟ್ರಸ್ಟ್ ನ ಅಧ್ಯಕ್ಷರು ಮತ್ತು ಸೇವಾ ಸಮಿತಿ ಎಲ್ಲಾ ಸದಸ್ಯರ ಕೋರಿದ್ದಾರೆ.

error: