May 2, 2024

Bhavana Tv

Its Your Channel

ದಾನ ಮಾಡುವ ಗಣೇಶ್ ಪ್ರಸಾದ್ ಅವರ ಕೈ ಅಧಿಕಾರದಲ್ಲಿದ್ದರೆ ಚಂದ- ಡಿ.ಕೆ. ಶಿವಕುಮಾರ್ –

ಗುಂಡ್ಲುಪೇಟೆ ಪಟ್ಟಣದ ನೆಹರು ಪಾರ್ಕ್ ಹತ್ತಿರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಪ್ರಜಾ ಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರವರು ನಗಾರಿ ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ ಹಾಗಾಗಿ ನಾವು ಪ್ರಜೆಗಳ ಧ್ವನಿಯಾಗಿ ಯಾತ್ರೆಯನ್ನ ಮಾಡಿಕೊಂಡು ಕರ್ನಾಟಕದಾದ್ಯಂತ ಪ್ರವಾಸವನ್ನು ಕೈಗೊಂಡು ಜನರುಗಳ ಕಷ್ಟ ಸುಖಕ್ಕೆ ಸ್ಪಂದಿಸಲು ಮುಂದೆ ಬಂದಿದ್ದೇವೆ. ಹಾಗಾಗಿ ನಮ್ಮ ಈ ಪ್ರಜಾ ಧ್ವನಿ ಯಾತ್ರೆಯ ಪ್ರಣಾಳಿಕೆಯಲ್ಲಿ ವಿಶೇಷವಾಗಿ ಮಹಿಳೆಯರಿಗೆ ಒಂದು ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ದಂತೆ ಒಂದು ವರ್ಷಕ್ಕೆ 12 ತಿಂಗಳಿಗೆ 24 ಸಾವಿರದಂತೆ ಮತ್ತು 200 ಯೂನಿಟ್ ವಿದ್ಯುತ್ ವನ್ನು ಉಚಿತವಾಗಿ ನೀಡುತ್ತೇವೆ ಎಂದು ಘೋಷಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಈ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಪಕ್ಷದ ಯುವ ಮುಖಂಡ ಎಚ್ ಎಂ ಗಣೇಶ್ ಪ್ರಸಾದ್ ಅವರನ್ನು 25ಸಾವಿರ ಮತಗಳ ಅಂತರದಿAದ ಗೆಲುವು ಆಗ ಬೇಕು ಎಂದು ಕಾರ್ಯಕರ್ತರಲ್ಲಿ ಕೇಳಿಕೊಂಡರು.

ಈ ಸಂದರ್ಭದಲ್ಲಿ ಮಾಜಿ ಸಂಸದರುಗಳಾದ ಎ ಸಿದ್ದರಾಜು, ಧ್ರುವನಾರಾಯಣ್, ಮಾಜಿ ಶಾಸಕರುಗಳಾದ ಬಾಲರಾಜು, ಕೃಷ್ಣಮೂರ್ತಿ, ಯುವ ಮುಖಂಡಎಚ್ ಎಮ್ ಗಣೇಶ್ ಪ್ರಸಾದ್, ಚಾಮುಲ್ ನಿರ್ದೇಶಕ ನಂಜುAಡ ಪ್ರಸಾದ್, ಎಚ್ ಎಸ್ ನ0ಜಪ್ಪ ಕಬ್ಬಳ್ಳಿ ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು , ಪಿಬಿ ರಾಜಶೇಖರ್, ಸೋಮಳ್ಳಿ ಶಿವ ನಾಗಪ್ಪ, ಕೆರೆ ಹಳ್ಳಿ ನವೀನ್, ಜಿಕೆ ಲೋಕೇಶ್, ಯುವ ಕಾಂಗ್ರೆಸ್ ಅಧ್ಯಕ್ಷಗುರುಪ್ರಸಾದ್ , ಮಣಿ.ನವೀನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: