April 29, 2024

Bhavana Tv

Its Your Channel

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪುರಸಭೆ ಪ್ರಗತಿ ಪರಿಶೀಲನ ಸಭೆ ನಡೆಸಿದ ಶಾಸಕ ಹೆಚ್ ಎಮ್ ಗಣೇಶ್ ಪ್ರಸಾದ್

ಗುಂಡ್ಲುಪೇಟೆ; ಪಟ್ಟಣದ ಪುರಸಭಾ ಸಭಾಂಗಣದಲ್ಲಿ ನಡೆದ ಪುರಸಭೆ ಪ್ರಗತಿ ಪರಿಶೀಲನೆ ಸಭೆಯನ್ನು ಪುರಸಭೆ ಸದಸ್ಯರೊಂದಿಗೆ ಪಟ್ಟಣದ ಸಮಸ್ಯೆಗಳ ಬಗ್ಗೆ ಶಾಸಕರಾದ ಹೆಚ್ ಎಮ್ ಗಣೇಶ್ ಪ್ರಸಾದ್
ಸವಿವರವಾಗಿ ಚರ್ಚೆ ನಡೆಸಿ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತು ಇನ್ನು ಹೆಚ್ಚಿನದಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅತಿ ಶೀಘ್ರದಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಹೊಸ ಮಾದರಿಯಾಗಿ, ಪ್ರತಿ ಮನೆಗೆ ತಲುಪಿಸುವ ಕಾಮಗಾರಿಗೆ ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು. ಪಟ್ಟಣದಲ್ಲಿ ಬಹು ಮುಖ್ಯವಾಗಿ ಕಳಪೆಯಿಂದ ಕೂಡಿದ್ದ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಾದಚಾರಿಗಳು ತಿರುಗಾಡುವ ಅಂಗಡಿ ಮುಂಭಾಗದಲ್ಲಿ ಸರಕು ಸಾಗಣೆಯ ಲಾರಿಗಳು ಕುಸಿದಿರುವುದನ್ನು ಸಾರ್ವಜನಿಕರು ಶಾಸಕರಿಗೆ ತಿಳಿಸಿದಾಗ ಅದರ ಬಗ್ಗೆ ಗಮನ ಹರಿಸುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು. ಅಲ್ಲದೆ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಬೇಕೆಂದು ಸಭೆಯಲ್ಲಿ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿಯಾದ ವಸಂತಕುಮಾರಿ, ಪುರಸಭೆ ಸದಸ್ಯರುಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ವರದಿ ; ಸದಾನಂದ ಕನ್ನೇಗಾಲ ಗುಂಡ್ಲಪೇಟೆ.

error: