ಬಾಗೇಪಲ್ಲಿ:ತಾಲೂಕಿನ ಗ್ರಾಮೀಣ ಡಿಸಿಸಿ ಬ್ಯಾಂಕ್ ಗ್ರಾಹಕರಿಗೆ ಬಡ್ಡಿ ರಹಿತ ಸಾಲದ ಯೋಜನೆ ಕಲ್ಪಿಸುವ ಸಲುವಾಗಿ ಸಂಚಾರಿ ಎಟಿಎಂ ವಾಹನವನ್ನು ಡಿಸಿಸಿ ಬ್ಯಾಂಕ್ ಸಿದ್ದಪಡಿಸಿದ್ದು ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ ಲೋಕಾರ್ಪಣೆ ಮಾಡಿ ಮಾತನಾಡಿ ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಸಂಘದ ವ್ಯಾಪ್ತಿಯ ೮೫ ಮಹಿಳಾ ಸ್ವಸಹಾಯ ಗುಂಪುಗಳ ಸಂಘಗಳಿಗೆ ? ೪ ಕೋಟಿ ಸಾಲ ವಿತರಣೆ ಮಾಡಿದರು.
ರಾಷ್ಟೀಕೃತ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಸಾಲ ಸೌಲಭ್ಯ ಸಿಗುವುದಿಲ್ಲ,ರೈತರಿಗೆ, ಮಹಿಳಾ ಗುಂಪುಗಳಿಗೆ ಸಾಲ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಾರೆ ಆದರೆ ನಮ್ಮ ಡಿಸಿಸಿ ಬ್ಯಾಂಕ್ ಕರೋನ ಕಷ್ಟ ಕಾಲದಲ್ಲೂ ಬಡವರಿಗೆ, ರೈತರಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ಒದಗಿಸುತ್ತದೆ ಎಂದು ಹೇಳಿದರು.
ಇನ್ನೂ ಮುಂದೆ ಮಹಿಳೆಯರು ಸಾಲದ ಮರುಪಾವತಿಗೆ ಬ್ಯಾಂಕ್ ಗೆ ಬರುವ ಅವಶ್ಯಕತೆ ಇರುವುದಿಲ್ಲ ಹಾಗೂ ನಿಮಗೆ ಹಣದ ಅವಶ್ಯಕತೆ ಇರುವಾಗ ಡಿಸಿಸಿ ಬ್ಯಾಂಕ್ ಸಂಚಾರಿ ಎಟಿಎಂ ಬ್ಯಾಂಕ್ ನಿಂದ ಸಾಲ ಮರುಪಾವತಿ ಹಾಗೂ ಹಣವನ್ನು ಡಿಸಿಸಿ ಬ್ಯಾಂಕ್ ನಿಂದ ನೀಡಿರುವ ಎಟಿಎಂ ಕಾರ್ಡ್ ನಿಂದ ಬಳಸಿ ಖಾತೆಯಲ್ಲಿನ ಹಣವನ್ನು ಪಡೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸಿ.ಎನ್.ಚೇತನ್,ದೇವರಗುಡಿಪಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಡಿ.ಎಸ್. ಜಯರಾಂ, ಆಂಜನೇಯ ರೆಡ್ಡಿ ,ಚಂದ್ರಶೇಖರ ರೆಡ್ಡಿ, ಸುಭಾನ್, ಗಂಗಾಧರಪ್ಪ, ರಾಮಕೃಷ್ಣಪ್ಪ,ರಾಮ ಲಕ್ಷ್ಮಮ್ಮ, ಕಾರ್ಯದರ್ಶಿ ಸಿ.ವೆಂಕಟರವಣಪ್ಪ, ಸಿಬ್ಬಂದಿ ಭೈಪರೆಡ್ಡಿ,ಪ್ರಭಾಕರ್ ರೆಡ್ಡಿ ಇದ್ದರು.
ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು
More Stories
ಬಾಗೇಪಲ್ಲಿ ಮಂಡಲ: ಮಹಿಳಾ ಕಾರ್ಯಕಾರಿಣಿ ಸಭೆ
ತಾಲ್ಲೂಕಿನಲ್ಲಿ ನಿಲ್ಲದ ನರೇಗಾ ಅಕ್ರಮಗಳು; ಕಣ್ಮುಚ್ಚಿ ಕುಳಿತ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳು?
ದೇಶದ ೫೦ ಕೋಟಿ ಜನರಿಗೆ ಕೋವಿಡ್ ಲಸಿಕೆ :- ಬಿಜೆಪಿ ಜಿಲ್ಲಾದ್ಯಕ್ಷ ರಾಮಲಿಂಗಪ್ಪ