May 20, 2024

Bhavana Tv

Its Your Channel

ಡಾ.ಶ್ಯಾಮ್ ಪ್ರಕಾಶ್ ಮುಖರ್ಜಿ ಬಲಿದಾನದ ಅಂಗವಾಗಿ ಬಿಜೆಪಿ ಯುವಮೊರ್ಚಾ ವತಿಯಿಂದ ಗಿಡ ನೆಡುವ ಕಾರ್ಯಕ್ರಮ:-

ಬಾಗೇಪಲ್ಲಿ: -ತಾಲ್ಲೂಕು ಭಾರತೀಯ ಜನತಾ ಪಾರ್ಟಿ ವತಿಯಿಂದ ಡಾ. ಶಾಮ್ ಪ್ರಕಾಶ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಕೊಂಡವಾರಿಪಲ್ಲಿ ಗ್ರಾಮದ ಪರಿಶಿಷ್ಟ ವರ್ಗದ ಮೆಟ್ರಿಕ್ ಬಾಲಕರ ವಸತಿ ನಿಲಯದ ಆವರಣದಲ್ಲಿ ಐವತ್ತು ಗಿಡಗನ್ನು ನೆಡೆಯುವ ಮೂಲಕ ಪಕ್ಷದ ಆದೇಶದ ಮೇರೆಗೆ ತಾಲೂಕು ಯಾದ್ಯಂತ ೫೦೦೦ ಗಿಡಗಳನ್ನು ತಾಲೂಕು ಮಟ್ಟದಲ್ಲಿ ಹಾಗೂ ಹೋಬಳಿ ಮಟ್ಟದ ಬಾಗೇಪಲ್ಲಿ ಯುವಮೋರ್ಚಾ ಕಡೆಯಿಂದ ವನ ಮಹೋತ್ಸವ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿಯೊಂದು ಗ್ರಾಮದಲ್ಲೂ ಐವತ್ತು ಗಿಡ ನೆಡುವ ಮಹತ್ವ ಕಾರ್ಯಕ್ರಮ ಬಾಗೇಪಲ್ಲಿ ಬಿಜೆಪಿ ಹಮ್ಮಿಕೊಂಡಿದೆ. ಇದೇ ಸಂದರ್ಭದಲ್ಲಿ ತಾಲೂಕು ಕೆ.ಡಿ.ಪಿ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಕೆ ಆರ್ ಪದ್ಮಾವತಿ, ಯಲ್ಲಂಪಲ್ಲಿ ಮಂಜುನಾಥ್, ಹಾಗೂ ಪ್ರಭಾಕರ್ ರೆಡ್ಡಿ ಅವರು ಗಿಡ ನೆಡೆಯುವುದರ ಮೂಲಕ ತಮ್ಮ ಮೊದಲ ಕಾರ್ಯಕ್ರಮ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸಿ.ಎನ್.ಧೀರಜ್ ಜಿಲ್ಲಾ ಕಾರ್ಯದರ್ಶಿ ಎಸ್ ಟಿ ಚಂದ್ರ ಮೋಹನ್ ಬಾಬು , ಎಪಿ. ಎಂ.ಸಿ. ಉಪಾಧ್ಯಕ್ಷ ಕೆ.ಆರ್ ಆಂಜೀನಪ್ಪ, ಪ್ರಧಾನ ಕಾರ್ಯದರ್ಶಿ ಗೋಪಾಲ್, ರಾಜ್ಯ ರೈತ ಮೋರ್ಚಾ ಕಾರ್ಯಕಾರಣಿ ಸದಸ್ಯ ನಂಜೇಶ್ ರೆಡ್ಡಿ, ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಜಿಲ್ಲಾ ಮುಖಂಡರಾದ , ರಾಮಪ್ಪ, ಲೋಕೇಶ್, ಪಾರ್ಥಸಾರಥಿ, ರವಿ ಕುಮಾರ್, ಬಾಬಾ ಪಕೃದ್ದೀನ್, ವೆಂಕಟಲಕ್ಷ್ಮಮ್ಮ, ಮಂಜುಳಾಬಾಯಿ,ಲಕ್ಷ್ಮಿ ಪುಷ್ಪ, ಮಮತ, ಕೊಂಡAವಾರಿಪಲ್ಲಿ ಲಕ್ಷ್ಮೀ , ಹಾಗೂ ಮುಖಂಡರು ಕಾರ್ಯಕರ್ತರು ಹಾಜರಾಗಿದ್ದರು.

ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

error: