ರೋಣ ಜಿಲ್ಲೆಯ ಗ್ರಾಮಗಳ ಅಭಿವೃದ್ದಿಗೆ ಯಾವಾಗಲೂ ಸಿದ್ದವಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ ಹೇಳಿದರು.
ತಾಲ್ಲೂಕಿನ ಯಾ. ಸ. ಹಡಗಲಿ ಗ್ರಾಮದಲ್ಲಿ ನಡೆದ ರೂ. ೫೮.೭೭ ಲಕ್ಷದ ಶಾಲಾ ಕಟ್ಟಡ ಉದ್ಘಾಟನೆ, ೪೫೭ ಮನೆಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಜಲ ಜೀವನ ಮಿಷನ್ ಯೋಜನೆಯ ಭೂಮಿ ಪೂಜೆ ಹಾಗೂ ೧೩೩ ಲಕ್ಷ ವೆಚ್ಚದ ಸಿ ಸಿ ರಸ್ತೆ ಹಾಗೂ ಡಾಂಬರೀಕರಣ ಮಾಡುವ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು,
ಗ್ರಾಮದ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು ಅವಶ್ಯಕತೆ ಇರುವ ಅಭಿವೃದ್ದಿ ಕಾಮಗಾರಿಗಳನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದರು. ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ಪೊಷಿಸುವಂತೆ ಎಸ್.ಡಿ.ಎಂ. ಸಿ ಅಧ್ಯಕ್ಷ, ಪಿಡಿಓ, ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರಿಗೆ ತಿಳಿಸಿದರು.
ಹೊಳೆ ಆಲೂರ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ಅಶೋಕ ಹೆಬ್ಬಳ್ಳಿ, ಮುತ್ತಣಗೌಡ ಮುಲ್ಕಿಪಾಟೀಲ, ಸೋಮು ಹುಡೇದ, ಗಿರೀಶಗೌಡ ಚನ್ನಪ್ಪಗೌಡ್ರ, ಹೊಳೆ ಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶರಣು ಬರಶೆಟ್ಟಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಸೋಮನಕಟ್ಟಿ, ಬಸವಂತಪ್ಪ ತಳವಾರ ಇದ್ದರು
ವರದಿ ವೀರಣ್ಣ ಸಂಗಳದ
More Stories
ಬಾಗೇಪಲ್ಲಿ ಮಂಡಲ: ಮಹಿಳಾ ಕಾರ್ಯಕಾರಿಣಿ ಸಭೆ
ತಾಲ್ಲೂಕಿನಲ್ಲಿ ನಿಲ್ಲದ ನರೇಗಾ ಅಕ್ರಮಗಳು; ಕಣ್ಮುಚ್ಚಿ ಕುಳಿತ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳು?
ದೇಶದ ೫೦ ಕೋಟಿ ಜನರಿಗೆ ಕೋವಿಡ್ ಲಸಿಕೆ :- ಬಿಜೆಪಿ ಜಿಲ್ಲಾದ್ಯಕ್ಷ ರಾಮಲಿಂಗಪ್ಪ