May 20, 2024

Bhavana Tv

Its Your Channel

ಪುರಸಭೆ ನಿವೃತ್ತ ಮುಖ್ಯಾಧಿಕಾರಿ ವಿ.ಪಂಕಜಾರೆಡ್ಡಿರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಬಾಗೇಪಲ್ಲಿ:-ಸಮಾಜದಲ್ಲಿ ಅತ್ಯುನ್ನತ ಜವಾಬ್ದಾರಿ ಹೊಂದಿದ ಯಾವುದೇ ಜನಪ್ರತಿನಿಧಿ, ಸಮಾಜಸೇವಕ, ಅಧಿಕಾರಿ, ನೌಕರ ತಾನು ಅಧಿಕಾರದಲ್ಲಿದ್ದಾಗ ಕೈಕೊಂಡ ಸಾಮಾಜಿಕ ಕಾಳಜಿಯುಳ್ಳ ಜನಪರ ಕಾರ್ಯಗಳು ಶಾಶ್ವತವೇ ಹೊರತು ಅಧಿಕಾರ ಮುಖ್ಯವಲ್ಲ ಎಂದು ಬಾಗೇಪಲ್ಲಿ ಪಟ್ಟಣದ ಪುರಸಭೆ ಸದಸ್ಯ ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎ.ನಂಜುAಡಪ್ಪ ಹೇಳಿದರು.

ಬಾಗೇಪಲ್ಲಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ವಿ.ಪಂಕಜಾರೆಡ್ಡಿ ಅವರು ಇಂದು ಸೇವಾ ನಿವೃತ್ತಿ ಹೊಂದಲಿರುವ ನಿಮಿತ್ಯ ಕನ್ನಡ ಪರ ಸಂಘಗಳು, ಗುತ್ತಿಗೆದಾರರು, ಪುರಸಭೆ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಬೀಳ್ಕೊಡುವ ಮೂಲಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಯಾಗಿದ್ದಾಗ ಸಮಯಕ್ಕೆ ಮಹತ್ವಕೊಡದೇ ಪುರಸಭೆ ಆಗುಹೋಗುಗಳಿಗೆ ಹಾಗೂ ನಗರದ ಜನಸಾಮಾನ್ಯರ ಆಶೋತ್ತರಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಿದ್ದ ಓರ್ವ ನಿಷ್ಠಾವಂತ ಅಧಿಕಾರಿ ವಿ.ಪಂಕಜಾರೆಡ್ಡಿ ೩೦/೬/೨೦೨೧ ರಂದು ಅಂದರೆ
೭ ವರ್ಷಗಳ ಕಾಲ ಪುರಸಭೆ ಸೇವೆ ಸಲ್ಲಿಸಿರುವುದು ಈ ಭಾಗದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಅವರು, ತಮ್ಮ ನೇರ ನಡೆ-ನುಡಿ ಹಾಗೂ ಸರಳ ಸಜ್ಜನಿಕೆಯಿಂದ ಪಟ್ಟಣದ ಕುಡಿಯುವ ನೀರಿನ ಯೋಜನೆ, ಪಟ್ಟಣದ ಶುಚಿತ್ವ ಹಾಗೂ ನೈರ್ಮಲ್ಯ, ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಜನಪ್ರತಿನಿಧಿಗಳಿಗೆ ಅಗತ್ಯ ಸಹಕಾರ ನೀಡುತ್ತಾ ಬಂದಿರುವ ಅವರ ಸುದೀರ್ಘ ಜೀವನ ಇಂದಿನ ಅಧಿಕಾರಿವರ್ಗಕ್ಕೆ ಮಾದರಿಯಾಗಬೇಕೆಂದು ಅವರ ನಿವೃತ್ತಿ ಜೀವನ ನೆಮ್ಮದಿಯಾಗಿರಲೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಪುರಸಭೆ ಸಭೆ ಮಾಜಿ ಅಧ್ಯಕ್ಷ ಬಿ.ಅರ್.ನರಸಿಂಹ ನಾಯ್ಡು, ಪುರಸಭೆ ಉಪಾಧ್ಯಕ್ಷ ಶ್ರೀನಿವಾಸ್, ಪುರಸಭೆ ಸದಸ್ಯರಾದ ಶ್ರೀನಿವಾಸ್ ರೆಡ್ಡಿ, ಗಡ್ಡಂ ರಮೇಶ್ ಮಧುಸೂದನ,ವನಿತಾ ದೇವಿ, ರೆಡ್ಡಿ,ಆಶೋಕ ರೆಡ್ಡಿ ಸುಜಾತನರಸಿಂಹ ನಾಯ್ಡು,ಜಬೀವುಲ್ಲಾ ಖಾನ್, ನೂರುಲ್ಲಾ,ರೇಷ್ಮಬಾನು,ಶಬಾನ ಪರ್ವೀನ್,ಹಸೀನಾ ಮನ್ಸೂರ್,ನರಸಿಂಹಮೂರ್ತಿ, ನಿಸಾರ್ ಅಹಮದ್,ಶ್ರೀನಾಥ್ ಪುರಸಭೆ ಸಿಬ್ಬಂದಿ ನಾಗರಾಜು, ಮುರಳಿ, ನಮಸ್ಕೃತ, ಅತಾವುಲ್ಲಾ, ಪೀರ್ ,ಶ್ರೀಧರ್ ಇನ್ನೂ ಮುಂತಾದವರು ಪ್ರಮುಖರು ಹಾಜರಿದ್ದರು.

ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ.

error: