ಬಾಗೇಪಲ್ಲಿ:-ತಾಲ್ಲೂಕಿನಾದ್ಯಂತ ಎಲ್ಲೆಡೆ ಶನಿವಾರ ಗುರುಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಬಾಗೇಪಲ್ಲಿ ಪಟ್ಟಣದ ಶಿರಡಿ ಸಾಯಿ ಬಾಬಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಶೇಷವಾಗಿ ಶಿರಡಿ ಸಾಯಿಬಾಬಾ ಗೆ ಮುಂಜಾನೆಯಿAದಲೇ ಗುರುವಿನ ಆರಾಧನೆ ನಡೆಯಿತು. ಭಜನೆ, ಪ್ರಾರ್ಥನೆ, ಸತ್ಯನಾರಾಯಣ ವ್ರತ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ಸಾಯಿಬಾಬಾನ ಮೂರ್ತಿಗೆ ಅಭಿಷೇಕ ಅಲಂಕಾರಗಳನ್ನು ಮಾಡಿ, ಭಕ್ತರು ಭಕ್ತಿಭಾವ ಮೆರೆದರು.
ದೇವಾಲದ ಪೂಜಾರಿಗಳು ಮಾತನಾಡಿ ಹಿಂದೂ ಪರಂಪರೆಯಲ್ಲಿ ಗುರು ಪೂರ್ಣಿಮೆಗೆ ವಿಶೇಷವಾದ ಮಹತ್ವವಿದೆ. ನಮ್ಮಲ್ಲಿರುವ ಪದ್ದತಿಗಳು, ಸಂಗೀತ, ಸಾಹಿತ್ಯ ಇವೆಲ್ಲವೂ ಬಂದಿರುವುದು ಗುರುವಿನ ಮೂಲಕ. ಒಂದು ರೀತಿ ನಮ್ಮ ಧರ್ಮ ನಿಂತಿರುವುದೇ ಗುರುವಿನ ಮೇಲೆ. ಹಾಗಾಗಿ ದೇವಸ್ಥಾನವನ್ನು ಬಹಳ ವಿನೂತನವಾಗಿ ಅಲಂಕರಿಸಿ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದರು.
ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಆಗಮಿಸಿದ ಭಕ್ತರು ಬಾಬಾ ದರ್ಶನ ಪಡೆದು ಧನ್ಯರಾದರು.
ಶ್ರೀ ಶಿರಡಿ ಸಾಯಿ ಬಾಬಾ ರವರ ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ಅನ್ನಧಾನವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಟ್ರಸ್ಟ್ ಅದ್ಯಕ್ಷ ಬಾಬು ರೆಡ್ಡಿ ,ಬಾಗೇಪಲ್ಲಿ ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷ ನರಸಿಂಹ ನಾಯ್ಡು, ಪುರಸಭೆ ಅದ್ಯಕ್ಷೆ ಗುಲ್ನಾಜ್ ಬೇಗಂ, ಉಪಾಧ್ಯಕ್ಷ ಶ್ರೀನಿವಾಸ್ ,ಶ್ರೀನಿವಾಸ್ ರೆಡ್ಡಿ, ಕೆ.ಡಿ.ಪಿ.ಸದಸ್ಯ ಅಮರನಾಥ ರೆಡ್ಡಿ, ಗೂಳೂರು ಎಸ್. ಎಸ್.ರಮೇಶ್ ಬಾಬು ,ಮಂಜುನಾಥ, ಸಂದೀಪ್, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.
ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ
More Stories
ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ
ಗುರಿ ಮುಟ್ಟಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು- ಡಾ. ಎ.ಹೆಚ್.ರಾಮರಾವ್