ಬಾಗೇಪಲ್ಲಿ:-ಸ.ಹಿ.ಪ್ರಾ ಶಾಲೆ ಆಚೇಪಲ್ಲಿಯಲ್ಲಿ ಮುಖ್ಯ ಶಿಕ್ಷಕರಾಗಿ ವಯೋನಿವೃತ್ತಿ ಹೊಂದಿದ ರಾಮರೆಡ್ಡಿಯವರಿಗೆ ಶಾಲೆ ವತಿಯಿಂದ ಇಂದು ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿದ್ದಪ್ಪ ರಾಮರೆಡ್ಡಿಯವರ ವೃತ್ತಿಪರತೆಯನ್ನು ಮನದುಂಬಿ ಶ್ಲಾಘಿಸಿ, ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭಕೋರಿದರು.
ವೇದಿಕೆಯಲ್ಲಿ ಜಿಲ್ಲಾ ಉಪಯೋಜನಾಧಿಕಾರಿಗಳಾದ ಡಿ.ಎನ್ ಸುಕನ್ಯ , ಕ್ಷೇತ್ರಸಂಪನ್ನೂಲ ಸಂಯೋಜಕರಾದ ವೆಂಕಟರಾಮ್ ,ಸರ್ಕಾರಿ ನೌಕರ ಸಂಘದ ಗೌರವಾಧ್ಯಕ್ಷರಾದ ಹನುಮಂತ ರೆಡ್ಡಿ , ರಂಗಾರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ವೆಂಕಟರವಣಪ್ಪ , ಸಿ.ವಿ ವೆಂಕಟರಾಯಪ್ಪ , ಫಯಾಜ್ , ಇ ಸಿ ಒ ಆಂಜನೇಯರೆಡ್ಡಿ, ಎಸ್ ಡಿ.ಎಂ ಸಿ ಅಧ್ಯಕ್ಷರಾದ ನಾಗರತ್ನಮ್ಮ, ಬಿಆರ್ಪಿ ಸಂಪನ್ಮೂಲವ್ಯಕ್ತಿಗಳು ,ಸಿ ಆರ್.ಪಿ ಗಳು ,ಯಲ್ಲಂಪಲ್ಲಿ ಕ್ಲಸ್ಟರ್ನ ಮುಖ್ಯ ಶಿಕ್ಷರುಗಳು , ಸಹಶಿಕ್ಷಕರುಗಳು ,ಪೋಷಕರು ,ಗ್ರಾಮಸ್ಥರು ಮತ್ತು ಸದರಿ ಶಾಲೆಯ ಬೋಧನಾ ಸಿಬ್ಬಂದಿ ವಾಣಿ , ಮುದ್ದು ಉಪಸ್ಥಿತರಿದ್ದರು.
ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ
More Stories
ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ
ಗುರಿ ಮುಟ್ಟಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು- ಡಾ. ಎ.ಹೆಚ್.ರಾಮರಾವ್