May 4, 2024

Bhavana Tv

Its Your Channel

ಸ.ಹಿ.ಪ್ರಾ .ಶಾಲೆ ಆಚೇಪಲ್ಲಿಯಲ್ಲಿ ಮುಖ್ಯ ಶಿಕ್ಷಕರಾದ ರಾಮರೆಡ್ಡಿ ಯವರಿಗೆ ವಯೋನಿವೃತ್ತಿ ಸನ್ಮಾನ

ಬಾಗೇಪಲ್ಲಿ:-ಸ.ಹಿ.ಪ್ರಾ ಶಾಲೆ ಆಚೇಪಲ್ಲಿಯಲ್ಲಿ ಮುಖ್ಯ ಶಿಕ್ಷಕರಾಗಿ ವಯೋನಿವೃತ್ತಿ ಹೊಂದಿದ ರಾಮರೆಡ್ಡಿಯವರಿಗೆ ಶಾಲೆ ವತಿಯಿಂದ ಇಂದು ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿದ್ದಪ್ಪ ರಾಮರೆಡ್ಡಿಯವರ ವೃತ್ತಿಪರತೆಯನ್ನು ಮನದುಂಬಿ ಶ್ಲಾಘಿಸಿ, ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭಕೋರಿದರು.
ವೇದಿಕೆಯಲ್ಲಿ ಜಿಲ್ಲಾ ಉಪಯೋಜನಾಧಿಕಾರಿಗಳಾದ ಡಿ.ಎನ್ ಸುಕನ್ಯ , ಕ್ಷೇತ್ರಸಂಪನ್ನೂಲ ಸಂಯೋಜಕರಾದ ವೆಂಕಟರಾಮ್ ,ಸರ್ಕಾರಿ ನೌಕರ ಸಂಘದ ಗೌರವಾಧ್ಯಕ್ಷರಾದ ಹನುಮಂತ ರೆಡ್ಡಿ , ರಂಗಾರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ವೆಂಕಟರವಣಪ್ಪ , ಸಿ.ವಿ ವೆಂಕಟರಾಯಪ್ಪ , ಫಯಾಜ್ , ಇ ಸಿ ಒ ಆಂಜನೇಯರೆಡ್ಡಿ, ಎಸ್ ಡಿ.ಎಂ ಸಿ ಅಧ್ಯಕ್ಷರಾದ ನಾಗರತ್ನಮ್ಮ, ಬಿಆರ್ಪಿ ಸಂಪನ್ಮೂಲವ್ಯಕ್ತಿಗಳು ,ಸಿ ಆರ್.ಪಿ ಗಳು ,ಯಲ್ಲಂಪಲ್ಲಿ ಕ್ಲಸ್ಟರ್‌ನ ಮುಖ್ಯ ಶಿಕ್ಷರುಗಳು , ಸಹಶಿಕ್ಷಕರುಗಳು ,ಪೋಷಕರು ,ಗ್ರಾಮಸ್ಥರು ಮತ್ತು ಸದರಿ ಶಾಲೆಯ ಬೋಧನಾ ಸಿಬ್ಬಂದಿ ವಾಣಿ , ಮುದ್ದು ಉಪಸ್ಥಿತರಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

ಭಟ್ಕಳ ಪ್ರಸಿದ್ಧ ಮಾರಿ ಜಾತ್ರೆಯ ನೇರಪ್ರಸಾರ ಭಾವನಾ Youtube subscribe ಆಗಿ ವೀಕ್ಷಿಸಿ
error: