April 24, 2024

Bhavana Tv

Its Your Channel

ಕೊರೋನಾ ವೈರಸ್ ನಿಯಂತ್ರಣ ಮಾಡಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಪ್ರಾರ್ಥಿಸಿ ಕೃಷ್ಣರಾಜಪೇಟೆ ತಾಲ್ಲೂಕಿನ ಭೂವರಹಾನಾಥ ಕಲ್ಲಹಳ್ಳಿಯ ಭೂವರಹಾಸ್ವಾಮಿ ದೇವಸ್ಥಾನದಲ್ಲಿ ವಿಶೇಷಪೂಜೆ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥನೆ ಸಲ್ಲಿಸಿದ ಗ್ರಾಮಸ್ಥರು ….

ಪ್ರಧಾನಮಂತ್ರಿಗಳಾದ ನರೇಂದ್ರಮೋಧಿ ಅವರು ದೇಶದಾದ್ಯಂತ ಕರೆ ನೀಡಿರುವ ಕೊರೋನಾ ಜನತಾಕರ್ಫ್ಯೂ ಯಶಸ್ವಿಯಾಗಬೇಕು. ಭಾರತ ದೇಶದಿಂದ ಮಹಾಮಾರಿ ಕೊರೋನಾ ವೈರಾಣುವನ್ನು ಹೊಡೆದೋಡಿಸುವ ಶಕ್ತಿಯನ್ನು ಭೂವರಹಾನಾಥಸ್ವಾಮಿಯು ನೀಡಿ ಆಶೀರ್ವದಿಸಲಿ ಎಂದು ಭಕ್ತರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಟ್ರಸ್ಟಿ ಶ್ರೀನಿವಾಸರಾಘವನ್ ಅವರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಸಾವಿರಾರು ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯು ಇಂದು ಕೊರೋನಾ ಭೀತಿಯಿಂದಾಗಿ ಇಳಿಮುಖವಾಗಿದೆ..ಭೂದೇವಿ ಸಮೇತನಾಗಿ ನೆಲೆಸಿರುವ ಭೂವರಹನಾಥಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ನೇತೃತ್ವದ ಆಗಮಿಕರ ತಂಡವು ಪೂಜಾ ವಿಧಿವಿಧಾನಗಳ ನೇತೃತ್ವವನ್ನು ವಹಿಸಿದ್ದರು….
ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ಸಚಿವ ನಾರಾಯಣಗೌಡರ ಸಂಭದಿ ದಾನಿಗಳು ಹಾಗೂ ಕೃಷಿತಜ್ಞರಾದ ವಿಶ್ವನಾಥ್
ದಂಪತಿಗಳನ್ನು ಅಭಿನಂದಿಸಿ ಗೌರವಿಸಲಾಯಿತು….

error: