April 27, 2024

Bhavana Tv

Its Your Channel

ಜನತಾ ಕರ್ಪ್ಯೂ ಕರೆ ಇಡೀ ತಾಲೂಕನಾದ್ಯಂತ ವ್ಯಾಪಕ ಬೆಂಬಲ

ಹುನಗುಂದ-ಮಾರಣಾAತಿಕ ಕೊರೋನ್ ವೈರಸ್‌ನ್ನು ನಿಯಂತ್ರಣಕ್ಕಾಗಿ ಜನತಾ ಕರ್ಪ್ಯೂ ಕರೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇಡೀ ತಾಲೂಕನಾದ್ಯಂತ ವ್ಯಾಪಕ ಬೆಂಬಲವನ್ನು ನೀಡಿ ತಾಲೂಕಿನ ಜನತೆ ರವಿವಾರ ಬೆಳಗ್ಗೆ ೭ ಗಂಟೆಯಿAದ ಮನೆಯ ಹೊರಗೆ ಬರದೇ ಕೊರೋನ್ ವೈರಸ್ ಓಡಿಸೋವ ಬಹುದೊಡ್ಡ ಪ್ರತಿಜ್ಞೆ ಮಾಡಿ ಕೊನೆಗೂ ಯಶಸ್ಸು ಕಂಡಿದ್ದು ಸಾಯಂಕಾಲ ೫ ಗಂಟೆಗೆ ಕೊರೋನ್ ರೋಗ ಓಡಿಸಲು ಶ್ರಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ,ಪೋಲಿಸ್ ಇಲಾಖೆ,ಪುರಸಭೆ ಸಿಬ್ಬಂದಿಗಳಿಗೆ ಮತ್ತು ಪೌರ ಕಾರ್ಮಿಕರಿಗೆ,ಮಾಧ್ಯಮ ಮಿತ್ರರಿಗೆ ಚಪ್ಪಾಳೆ ತಟ್ಟುವ ಮೂಲಕ ಅವರಿಗೆಲ್ಲಾ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜ ನಿರ್ದೇಶಕ ಶ್ರೀಕೃಷ್ಣ ಜಾಲಿಹಾಳ,ಮಲ್ಲಿಕಾರ್ಜುನ ಕುಂಟೋಜಿ,ಸAಜೀವಪ್ಪ ಗೋವಿನಗಿಡದ,ಭಜಂತ್ರಿ,ಬಸರಿಗಿಡದ,ಮುಕ್ಕಣ್ಣನವರ,ಸಿದ್ದು ನಾಗೂರ,ನಿಂಗಪ್ಪ ಅಂಟರತಾನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

error: