May 26, 2023

Bhavana Tv

Its Your Channel

ಹೊನ್ನಾವರ ಭಾರತೀಯ ಜನತಾ ಪಕ್ಷದಿಂದ ಮಹಾಶಕ್ತಿಕೇಂದ್ರವಾರು ತುರ್ತು ತಂಡ ರಚನೆ.

ಬಿಜೆಪಿ ರಾಜ್ಯ ಘಟಕದ ಸೂಚನೆ ಮೇರೆಗೆ ಕರೋನಾ ವಿರುದ್ದ ಸಂಕಷ್ಟದಲ್ಲಿದ್ದವರಿಗೆ ಹಾಗೂ ಮೆಡಿಸಿನ್ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಅಗತ್ಯತೆ ಇದ್ದಲ್ಲಿ ಮಹಾಶಕ್ತಿಕೇಂದ್ರವಾರು ತಂಡ ರಚಿಸಲಾಗಿದೆ ಎಂದು ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ ಮಾಹಿತಿ‌ ನೀಡಿದ್ದಾರೆ. ತಾಲೂಕಿನ ಮಹಾಶಕ್ತಿ ಕೇಂದ್ರವಾದ ಮುಗ್ವಾ, ಹಳದೀಪುರ, ಮಂಕಿ, ಹೊನ್ನಾವರ, ನಗರಬಸ್ತಿಕೇರಿ, ಮಾವಿನಕುರ್ವಾ ಎಂದು ವಿಂಗಡಿಸಲಾಗಿದೆ. ಈ ಮಹಾಶಕ್ತಿಕೇಂದ್ರವಾರು ಬರುವ ಗ್ರಾಮಗಳಿಗೆ ಪ್ರತಿ ಕೇಂದ್ರದಿಂದ ೧೨ ಜನ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ . ಈಗಾಗಲೇ ದೇಶದೆಲ್ಲಡೆ ಲಾಕ್ ಡೌನ್ ಮಾಡಲಾಗಿದ್ದು ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಸಮಸ್ಯೆಯಾಗಬಾರದು ಅದರಲ್ಲೂ ಮೆಡಿಕಲ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಇದರಂತೆ ನಮ್ಮಲ್ಲಿ ತಂಡ ರಚಿಸಿದ್ದು ಸದಸ್ಯರು ತಮ್ಮ ವ್ಯಾಪ್ತಿಯಲ್ಲಿನ ಮಾಹಿತಿಯನ್ನು ಮನೆಯಿಂದ ಹೊರಹೋಗದೇ ಲಭ್ಯವಿರುವ ತಂತ್ರಾಶವನ್ನು ಬಳಸಿಕೊಂಡು ಮಾಡುವಂತೆ ಸೂಚಿಸಲಾಗಿದೆ. ಸಹಾಯವಾಣಿ ಸಂಖ್ಯೆ 9448331519
8073829314 ಮಾಹಿತಿಗಾಗಿ ಸಂಪರ್ಕಿಸಬಹುದು .

About Post Author

error: