
ಕುಮಟಾ : ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕರೊನಾ ಸೋಂಕಿನ ವಿರುದ್ಧ ಲಾಕ್ಡೌನ್ ಜಾರಿಯಲ್ಲಿರುವದರಿಂದ ದಿನದ ದುಡಿಮೆ ನಂಬಿ ಬದುಕುವ ಕುಟುಂಬಗಳು ತೀರಾ ಸಂಕಟಕ್ಕೆ ಬೀಳದಂತೆ ನನ್ನಿಂದ ಸಾಧ್ಯವಾದಷ್ಟು ನೆರವಾಗುವ ಕಾರ್ಯ ಪ್ರತಿನಿತ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಕ್ಷೇತ್ರ ಜನತೆ ಲಾಕ್ಡೌನ್ಗೆ ಉತ್ತಮ ಸಹಕಾರ ನೀಡಿದ್ದಾರೆ. ಇಂಥ ಸಂಕಟದ ಘಳಿಗೆಯಲ್ಲಿ ದಿನದ ದುಡಿಮೆ ಬಿಟ್ಟು ಮನೆಯಲ್ಲೇ ಇರುವ ತೀರಾ ಬಡವರನ್ನು ಗುರುತಿಸಿ ಸಹಾಯ ಮಾಡುತ್ತಿದ್ದೇನೆ. ಹಾಗೆಯೇ ಎಲ್ಲಾ ಕಡೆ ಉಚಿತವಾಗಿ ತರಕಾರಿ ವಿತರಣೆ ಮಾಡುತ್ತಿದ್ದೇನೆ. ಈಗಾಗಲೇ ತಾಲೂಕಿನ ೭೦೦ಕ್ಕೂ ಹೆಚ್ಚು ರಿಕ್ಷಾ ಚಾಲಕ ಮಾಲಕರಿಗೆ ತಲಾ ಸಾವಿರರೂ ಧನಸಹಾಯ ಮಾಡಿದ್ದೇನೆ. ಹಾಗೆಯೇ ಪ್ರಯಾಣಿಕ ಟೆಂಪೋ ಚಾಲಕ ಮಾಲಕರಿಗೂ ಧನಸಹಾಯ ಮಾಡುವ ಬಗ್ಗೆ ಚಿಂತನೆ ಮಾಡಿದ್ದು ಸದ್ಯ ೬೦೦ ಆಹಾರ ಕಿಟ್ ಸಿದ್ಧಪಡಿಸಲಾಗಿದ್ದು ಕಿಟ್ ವಿತರಿಸುತ್ತಿದ್ದೇನೆ. ಕಿಟ್ನಲ್ಲಿ ಒಂದು ಕೆಜಿ ಅವಲಕ್ಕಿ, ಒಂದು ಕೆಜಿ ಗೋಽ ಹಿಟ್ಟು , ಅರ್ಧ ಕೆಜಿ, ಬೇಳೆ, ಅರ್ಧ ಕೆಜಿ.ಸಕ್ಕರೆ, ಕಾಲು ಕೆಜಿ ಚಹಾಪುಡಿ ಮುಂತಾದವು ಇರಲಿದೆ ಎಂದರು.
ಇದೇ ವೇಳೆ ಎಲ್ಲರಿಗೂ ಮಾಸ್ಕ್ಗಳನ್ನೂ ಕೂಡಾ ವಿತರಿಸಲಾಯಿತು. ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಕುಮಾರ ಕವರಿ, ಚಿದಾನಂದ ನಾಯ್ಕ ಇನ್ನಿತರರು ಇದ್ದರು.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.