April 1, 2023

Bhavana Tv

Its Your Channel

ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿಯುವ ವಾಹನ ಜಪ್ತಿ

ಯುವಕರ ಉಪಟಳ ತಡೆಯುವ ನಿಟ್ಟಿನಲ್ಲಿ ಭಟ್ಕಳದ ಉಪವಿಭಾಗಾಧಿಕಾರಿ ಭರತ್, ಡಿವೈಎಸ್‌ಪಿ ಗೌತಮ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ವಾಹನ ಜಪ್ತಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.

ಭಟ್ಕಳ ನಗರದಲ್ಲಿ ಖುದ್ದು ರಸ್ತೆಗೆ ಇಳಿದ ಉಪವಿಭಾಗಾಧಿಕಾರಿ ಭರತ್ ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡ, ಸೋಮವಾರ ಮತ್ತು ಮಂಗಳವಾರ ಇಲ್ಲಿನ ಹಳೆ ಬಸ್ ನಿಲ್ದಾಣದ ಸಮೀಪ ಹಾಗೂ ತಾಲೂಕಿನ ವಿವಿಧ ಕಡೆ ರಸ್ತೆಗಿಳಿದ ೪೫ಕ್ಕೂ ಅಧಿಕ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.
ಸಂಶುದ್ದೀನ್ ಸರ್ಕಲ್ ಸೇರಿದಂತೆ ಪಟ್ಟಣ ವ್ಯಾಪ್ತಿಯ ಪ್ರಮುಖ ಕಡೆಗಳಲ್ಲಿ ಉಪವಿಭಾಗಾಧಿಕಾರಿ ಭರತ್ , ಡಿವೈಎಸ್‌ಪಿ ಗೌತಮ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಾಹನ ಜಪ್ತಿ ಕಾರ್ಯಾಚರಣೆ ನಡೆಸಿದ್ದು, ಲಾಕ್‌ಡೌನ್ ಉಲ್ಲಂಘನೆ ಮಾಡಿದ ೪೫ಕ್ಕೂ ಅಧಿಕ ವಾಹನ ಚಾಲಕರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ವಾಹನ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಲಾಕ್‌ಡೌನ್ ಅವಧಿ ಮುಗಿದ ಬಳಿಕ ಏಪ್ರಿಲ್ ೧೬ ರಂದು ವಾಹನಗಳನ್ನು ಮರಳಿಸುವುದಾಗಿ ತಿಳಿಸಿದ್ದಾರೆ.

About Post Author

error: