
ಮುರ್ಡೇಶ್ವರ ; ಕರೋನಾ ಭಯದ ನಡುವೆ ಅನಾರೊಗ್ಯ ಸಂಭವಿಸಿದರೆ ತುರ್ತು ಅಂಬುಲೆನ್ಸ ಸೇವೆಯು ಮುರ್ಡೆಶ್ವರದಲ್ಲಿ ಇಲ್ಲದೇ ಇರುವುದು ಆತಂಕಕಾರಿಯಾಗಿದೆ ಎಂದು ಕರವೇ ಅಧ್ಯಕ್ಷ ಮಂಜುನಾಥ ಗೌಡ ಆತಂಕ ವ್ಯಕ್ತಪಡಿಸಿ ಜಿಲ್ಲಾದೀüಕಾರಿಗಳು ಈ ಬಗ್ಗೆ ಮಧ್ಯೆ ಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ
ಐತಿಹಾಸಿಕ ಹಾಗೂ ಪ್ರವಾಸಿ ಸ್ಥಳ ಎಂದು ಹಿರಿಮೆ ಹೊಂದಿರುವ ಮುರ್ಡೇಶ್ವರದ ಸುತ್ತಮುತ್ತಲಿನಲ್ಲಿ ವಾಸಿಸುವವರಿಗೆ ಅನಾರೊಗ್ಯ ಸಂಭವಿಸಿದರೆ ತುರ್ತು ಸಾಗಟ ಮಾಡಲು ಅಂಬುಲೆನ್ಸ ಸೇವೆ ಇಲ್ಲದೇ ಹಲವು ದಿನಗಳು ಕಳೆದಿದೆ. ಭಟ್ಕಳಕ್ಕೆ ಸಮೀಪವಿರುವ ಈ ಸ್ಥಳದಲ್ಲಿ ದೇಶದೆಲ್ಲಡೆಯಂತೆ ಈ ಭಾಗದಲ್ಲಿಯೂ ಲಾಕ್ ಡೌನ ಸ್ಥಿತಿ ನಿರ್ಮಾಣವಾಗಿದೆ. ಅನಾರೊಗ್ಯ ಸಂಭವಿಸಿದರೆ ಇಲ್ಲಿಯ ಜನರು ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ಇಲ್ಲಿಯ ಸಮಸ್ಯೆ ಬಗ್ಗೆ ತಿಳಿಸಿದಾಗ ಅಧಿಕಾರಿಗಳು ಕಣ್ಣಮುಚ್ಚಾಲೆ ಆಟ ಆಡಿದ್ದರು. ಮಂಕಿಯಲ್ಲಿರುವ ಅಂಬುಲೆನ್ಸ ಹಗಲಿನಲ್ಲಿ ಇಟ್ಟು ರಾತ್ರಿ ಮಂಕಿಗೆ ತರುತ್ತಿದ್ದರು. ಇದು ಬೇಕಿಲ್ಲ ಈ ಹಿಂದೆ ಮುರ್ಡೆಶ್ವರದಲ್ಲಿ ಇದ್ದ ಅಂಬುಲೆನ್ಸ ಸೇವೆ ಪುನಃ ಆರಂಭಿಸಬೇಕು ಎಂದು ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ ಒತ್ತಾಯಿಸಿದ್ದಾರೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.