
ಕರೋನಾ ಸೊಂಕು ಪರಿಣಾಮ ಲೌಕಡಾನ್ ಇರುವುದರಿಂದ ಅನೇಕ ಕುಟುಂಬಗಳು ದುಡಿಮೆ ಇಲ್ಲದೆ ತೀರಾ ಸಂಕಷ್ಟದಲ್ಲಿ ಇರುವುದನ್ನು ಅರಿತು ಮನಗಂಡು ಜನರಲ್ಲಿ ಕರೋನಾ ಜಾಗ್ರತೆ ಬಗ್ಗೆ ತಿಳಿಸಿ, ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳಿ ಹೇಳಿ ಹದಿನೈದು ದಿನಗಳ ಕಾಲ ದಿನ ಬಳಕೆಗೆ ಬರುವಷ್ಟು ಬೆಳೆ,ಎಣ್ಣೆ,ಬಟಾಟೆ, ನಿರುಳ್ಳಿ ಇತರ ದಿನೋಪಯೋಗಿ ಪದಾರ್ಥಗಳು ಮಾವಿನಕುರ್ವಾ ಭಾಗದಲ್ಲಿ 47 ಕುಟುಂಬಗಳಿಗೆ, ಮೋಳಕೋಡ ಭಾಗದಲ್ಲಿ 40 ಕುಟುಂಬಗಳಿಗೆ, ಸಾಲ್ಕೋಡ ಭಾಗದ 50 ಹೀಗೆ ತಾಲೂಕಿನ ಸುಮಾರು 280 ಕುಟುಂಬಗಳಿಗೆ ನೇರವಾದರು. ಈ ಸಂದರ್ಭದಲ್ಲಿ ಜಿ.ಎಸ್.ಬಿ ಸಮಾಜದ ಹಿರಿಯರಾದ ರಾಮದಾಸ್ ಪ್ರಭು ಶಿಕಾರ, ವಿಶ್ವನಾಥ ನಾಯಕ್, ವೆಂಕಟೇಶ ಪ್ರಭು, ಗಣಪತಿ ಕಾಮತ್, ನಮಿತಾ ಉಮೇಶ್ ಕಾಮತ್, ಗುರು ಜೀವೋತ್ತಮ ನಾಯಕ್ ಹಾಗೂ ಸಂಘಟಕರು ಉಪಸ್ಥಿತರಿದ್ದರು. ಸಮಾಜದ ಈ ಸಮಾಜಮುಖಿ ಕಾರ್ಯಕ್ಕೆ ಹೊನ್ನಾವರ ತಾಲೂಕ ಆಡಳಿತ, ಪೋಲಿಸ್ ಇಲಾಖೆಯವರು ಶ್ಲಾಘನೆ ವ್ಯಕ್ತಪಡಿಸಿದೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.