
ಕುಮಟಾ ; ಲಾಕ್ ಡೌನ್ ಪ್ರಾರಂಭವಾದಾಗಿನಿOದ ಕ್ಷೇತ್ರದ ಬಹುತೇಕ ಬಡವರ ಹಿಂದುಳಿದವರ ಕಷ್ಟಕ್ಕೆ ತನ್ನ ಕೈಲಾದ ಮಟ್ಟಿಗೆ ಶಾಸಕ ದಿನಕರ ಶೆಟ್ಟಿ ನೆರವಾಗುತ್ತ ಬಂದಿದ್ದಾರೆ
ಬಡವರಿಗೆ ಹಿಂದುಳಿದವರಿಗೆ ತರಕಾರಿ, ದಿನಸಿ ವಿತರಿಸುತ್ತ ಬಂದಿರುವ ಶಾಸಕರು ಇಂದು ಹೊಸ ಹೆರವಟ್ಟಾ, ವಿವೇಕ ನಗರ, ಮಣಕಿ ಭಾಗದ ಪರಿಷಿಷ್ಟ ಜಾತಿ, ಪಂಗಡ ದ ಸುಮಾರು ೧೨೫ ಕುಟುಂಬಗಳಿಗೆ ದಿನಸಿ ವಿತರಿಸಿದರು. ರವೆ, ಅವಲಕ್ಕಿ, ಎಣ್ಣೆ, ಸಕ್ಕರೆ, ಚಾಪುಡಿ, ಬೇಳೆ, ಗೋದಿಹಿಟ್ಟನ್ನು ಒಳಗೊಂಡ ಕಿಟ್ ವಿತರಣೆ ಮಾಡಿದರು..
ಈ ಸಂಧರ್ಭದಲ್ಲಿ ಕುಮಟಾ ಮಂಡಳ ಅಧ್ಯಕ್ಷ ಹೇಮಂತ ಗಾಂವಕರ್, ಪ್ರಶಾಂತ ಶೇಟ್, ಮಂಜು ಮುಕ್ರಿ , ವಿನಾಯಕ ನಾಯ್ಕ, ಪುರಸಭಾ ಸದಸ್ಯೆ ಗೀತಾ ಮುಕ್ರಿ, ಗೌರಿ ವೈದ್ಯ, ಕುಮಾರ ಕೌರಿ, ಮೋಹಿನಿ ಗೌಡ, ವಿಶ್ವನಾಥ ನಾಯ್ಕ, ತಿಮ್ಮಪ್ಪ ಮುಕ್ರಿ ಇದ್ದರು.

More Stories
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಪ್ರಸಿದ್ಧ ವೈದ್ಯ ಡಾ. ವೆಂಕಟರಮಣ ಹೆಗಡೆ ಹಾಗೂ ಸಂಗೀತಾ ಹೆಗಡೆ ಅವರಿಗೆ ಹುಕ್ಕೇರಿ ಶ್ರೀಗಳಿಂದ ಗೌರವ.
ಭಟ್ಕಳ: ಚುನಾವಣೆ ಎದುರಿಸಲು ನನ್ನ ಬಳಿ ಹಣ ಇದ್ದಿಲ್ಲ. ಮಹೀಳೆಯರು ತಮ್ಮಲ್ಲಿರುವ ಚಿನ್ನವನ್ನು ಅಡವು ಇಟ್ಟು ನನಗೆ ಹಣ ತಂದುಕೊಟ್ಟಿದ್ದಾರೆ. ನಾನು ಯಾವತ್ತೂ ಹಣವನ್ನು ಪ್ರೀತಿಸಲಿಲ್ಲ, ಮನುಷ್ಯರನ್ನು ಪ್ರೀತಿಸಿದ್ದೇನೆ ಎಂದು ನೂತನವಾಗಿ ನೇಮಕಗೊಂಡಿರುವ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು