
ಕೊರೊನಾ ಸೋಂಕು ಹರಡುವುದರಿಂದ ದೇಶದಾದ್ಯಂತ ಲಾಕ್ಡೌನ ಇರುವುದರಿಂದ ಕುಮಟಾ ತಾಲೂಕಿನ ಅನೇಕ ಕುಟುಂಬಗಳು ದುಡಿಮೆ ಇಲ್ಲದೆ ತೀರಾ ಸಂಕಷ್ಟದಲ್ಲಿ ಇರುವುದನ್ನು ಮನಗಂಡು ಕುಮಟಾ ತಾಲೂಕಿನ ಶ್ರೀ ಶಕ್ತ ವೀರಮಾರುತಿ ಚಿಣ್ಣರ ಯಕ್ಷಗಾನ ಮಂಡಳಿ ಹಾಗೂ ದಾನಿಗಳ ಸಹಾಯದಿಂದ ತಾಲೂಕಿನ ಕಾಗಲ್, ಗುಡ್ಕಾಗಲ್, ಬಾಡ ಹುಬ್ಬಣಗೇರಿಯ ಸೇರಿದಂತೆ ೪ ಗ್ರಾಮಗಳಲ್ಲಿನ ತೀರಾ ಬಡಕುಟುಂಬಗಳಿಗೆ ದಿನಬಲಕೆಯ ಅಗತ್ಯ ವಸ್ತುಗಳಾದ ಅಕ್ಕಿ, ಚಹಾಪುಡಿ, ತೊಗರಿಬೆಳೆ, ಮಸಾಲೆ ಪೌಡರ, ಬಟಾಟಿ, ಎಣ್ಣೆ, ಈರುಳ್ಳಿ,ಸಕ್ಕರೆ ಸೇರಿದಂತೆ ಪ್ರತಿ ಕುಟುಂಬಕ್ಕೂ ೫೦೦ ರೂಪಾಯಿ ಅಗತ್ಯ ವಸ್ತುಗಳನ್ನು ೬೬ ಕುಟುಂಬಗಳಿಗೆ ವಿತರಿಸಲಾಯಿತು. ಈ ವೇಳೆ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ ಅಗತ್ಯ ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕೆಂದು ಹೇಳಲಾಯಿತು.

More Stories
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.
ಭಟ್ಕಳದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ,