
ಲಾಕ್ ಡೌನಿನಿಂದಾಗಿ ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಬದುಕು ಸಾಗಿಸಲು ಕಷ್ಟಪಡುತ್ತಿದ್ದರು. ಇದನ್ನು ಮನಗಂಡ ಹೊನ್ನಾವರದ ರೋಟರಿ ಕ್ಲಬ್ಬು ಇಂತಹ 125 ಕಾರ್ಮಿಕರ ಕುಟುಂಬಗಳಿಗೆ ದಿನಸಿ ಸಾಮಾನುಗಳ ಪೊಟ್ಟಣಗಳನ್ನು ಇತ್ತೀಚೆಗೆ ವಿತರಿಸಿತು. ಚಾಂದ್ರಾಣಿಯಲ್ಲಿ 110 ಕುಟುಂಬಗಳಿಗೆ, ಆರೊಳ್ಳಿಯ 10 ಕುಟುಂಬಗಳಿಗೆ ಮತ್ತು ಮೂರುಕಟ್ಟೆಯ 5 ಕುಟುಂಬಗಳಿಗೆ ತಲಾ 400 ರೂಪಾಯಿ ಮೌಲ್ಯದ ದಿನಸಿ ಸಾಮಾನುಗಳ ಪೊಟ್ಟಣಗಳನ್ನು ವಿತರಿಸಲಾಯಿತು.
ಕ್ಲಬ್ಬಿನ ಬಹುತೇಕ ಸದಸ್ಯರು ಅಧ್ಯಕ್ಷ – ಕಾರ್ಯದರ್ಶಿಗಳೊಂದಿಗೆ ಈ ಸೇವಾಕಾರ್ಯದಲ್ಲಿ ಕೈ ಜೋಡಿಸಿದ್ದರು. ಅಲ್ಲದೇ ವಿತರಣೆ ಸಂದರ್ಭದಲ್ಲಿ ಹಾಜರಿದ್ದು ಸಹಕರಿಸಿದರು.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.