![](https://kannada.bhavanatv.com/wp-content/uploads/2020/04/IMG-20200421-WA0008-1024x768.jpg?v=1587575245)
ಲಾಕ್ ಡೌನಿನಿಂದಾಗಿ ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಬದುಕು ಸಾಗಿಸಲು ಕಷ್ಟಪಡುತ್ತಿದ್ದರು. ಇದನ್ನು ಮನಗಂಡ ಹೊನ್ನಾವರದ ರೋಟರಿ ಕ್ಲಬ್ಬು ಇಂತಹ 125 ಕಾರ್ಮಿಕರ ಕುಟುಂಬಗಳಿಗೆ ದಿನಸಿ ಸಾಮಾನುಗಳ ಪೊಟ್ಟಣಗಳನ್ನು ಇತ್ತೀಚೆಗೆ ವಿತರಿಸಿತು. ಚಾಂದ್ರಾಣಿಯಲ್ಲಿ 110 ಕುಟುಂಬಗಳಿಗೆ, ಆರೊಳ್ಳಿಯ 10 ಕುಟುಂಬಗಳಿಗೆ ಮತ್ತು ಮೂರುಕಟ್ಟೆಯ 5 ಕುಟುಂಬಗಳಿಗೆ ತಲಾ 400 ರೂಪಾಯಿ ಮೌಲ್ಯದ ದಿನಸಿ ಸಾಮಾನುಗಳ ಪೊಟ್ಟಣಗಳನ್ನು ವಿತರಿಸಲಾಯಿತು.
ಕ್ಲಬ್ಬಿನ ಬಹುತೇಕ ಸದಸ್ಯರು ಅಧ್ಯಕ್ಷ – ಕಾರ್ಯದರ್ಶಿಗಳೊಂದಿಗೆ ಈ ಸೇವಾಕಾರ್ಯದಲ್ಲಿ ಕೈ ಜೋಡಿಸಿದ್ದರು. ಅಲ್ಲದೇ ವಿತರಣೆ ಸಂದರ್ಭದಲ್ಲಿ ಹಾಜರಿದ್ದು ಸಹಕರಿಸಿದರು.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.