
ಹೊನ್ನಾವರ ಎ. ೨೪ : ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ವೈದ್ಯರಿದ್ದು ಸಿಬ್ಬಂದಿಗಳು ತೃಪ್ತಿಕರವಾಗಿ ಕೆಲಸಮಾಡುತ್ತಿದ್ದಾರೆ. ಈಗ ಹಗಲು ರಾತ್ರಿ ಕೋವಿಡ್-೧೯ ತಪಾಸಣೆಯ ಕೆಲಸ ನಡೆದಿದೆ. ಹೀಗಿರುವಾಗ ಅವರು ಉಳಿದುಕೊಂಡಿರುವ ವಸತಿಗೃಹವನ್ನು ಕಂಡರೆ ಅಯ್ಯೋ ಅನಿಸುತ್ತದೆ.
ವೈದ್ಯರ ೩, ಶುಶ್ರೂಶಕಿಯರ ೪, ‘ಡಿ’ಗುಂಪಿನ ನೌಕರರ ೫, ಮತ್ತು ವಾಹನ ಚಾಲಕರ ೨ ಒಟ್ಟಿಗೆ ೧೪ ವಸತಿಗೃಹಗಳಿವೆ. ಇವೆಲ್ಲವೂ ೭೦ವರ್ಷ ಹಿಂದಿನದಾಗಿದ್ದು ಹಂಚಿನ ಹೊದಿಕೆಯಿದೆ. ಗೋಡೆಗಳು ಬಿರುಕು ಬಿಟ್ಟಿದ್ದು ಸುಣ್ಣಬಣ್ಣ ಕಂಡಿಲ್ಲ. ಕೆಲವು ಕಟ್ಟಡಗಳು ಕುಸಿದು ಬೀಳುವ ಬೀತಿಯಲ್ಲಿ ರೀಪು, ಪಕಾಸು ಮುರಿದು ಹೋಗಿದೆ. ಗಿಡಗಂಟಿ ಬೆಳೆದು ಕಾಡಾಗಿದೆ. ಈ ವಸತಿಗೃಹಗಳು ಮನುಷ್ಯರ ವಾಸಕ್ಕೆ ಅಯೋಗ್ಯ ಎಂದು ಜಿಲ್ಲಾ ಪಂಚಾಯತ ಇಂಜಿನೀಯರಿAಗ್ ವಿಭಾಗ ಅಭಿಪ್ರಾಯಕೊಟ್ಟಿದೆ. ಹೊಸ ಕಟ್ಟಡ ಮಂಜೂರಾಗುವ ಮಾತಿರಲಿ ಇರುವ ಕಟ್ಟಡವನ್ನು ಆರೋಗ್ಯ ಇಲಾಖೆ ದುರಸ್ಥಿಮಾಡಿಕೊಟ್ಟಿಲ್ಲ. ಅನಿವರ್ಯವಾಗಿ ಕಾನೂನಿನಂತೆ ಸಿಬ್ಬಂದಿಗಳು ಆಸ್ಪತ್ರೆಗೆ ಹತ್ತಿರದ ಅದೇ ವಸತಿಗೃಹದಲ್ಲಿ ಉಳಿದುಕೊಂಡು ಸಂಕಟಪಡುತ್ತಿದ್ದಾರೆ. ಈ ವಿಷಯವನ್ನು ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಗಮನಕ್ಕೂ ತರಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಮಳೆಗಾಲ ಬರುವುದರಿಂದ ಸರ್ಕಾರ ತುರ್ತು ಈ ಕಟ್ಟಡಗಳ ಛಾವಣಿ ಬದಲಾಯಿಸಿ ಸುಣ್ಣಬಣ್ಣ ಮಾಡಿಕೊಡಬೇಕಿದೆ. ಇದೇ ಆವಾರದಲ್ಲಿರುವ ಮಂಗನ ಕಾಯಿಲೆ ಜಿಲ್ಲಾ ಕಾರ್ಯಾಲಯಕ್ಕೂ ಕಟ್ಟಡವಿಲ್ಲ. ರಾಜ್ಯಮಟ್ಟದಲ್ಲಿ ಆಸ್ಪತ್ರೆ ಪ್ರಥಮ ಸಾಲಿನಲ್ಲಿ ಪರಿಗಣಿಸಲ್ಪಟ್ಟಿದ್ದರೂ ಇಲ್ಲಿ ದುಡಿಯುವ ಸಿಬ್ಬಂದಿಗಳ ವಸತಿಗೃಹ ಕೊನೆಯ ಸಾಲಿನಲ್ಲೂ ಇಲ್ಲ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.