
ಹೊನ್ನಾವರ; ಮಹಿಳೆಯರ ಸಂಕಷ್ಟಕ್ಕೆ ನೆರವಾಗಲು ೧೯೪೪ರಿಂದ ಕಾರ್ಯನಿರ್ವಹಿಸುತ್ತಿರುವ ಭಾರತಿ ಮಹಿಳಾ ವಿವಿದದ್ದೇಶ ಸಂಘವು ಈ ಹಿಂದಿನಿoದಲೂ ಅನೇಕ ಮಹಿಳಾ ಕುಟುಂಬಕ್ಕೆ ನೆರವಾಗಿದೆ. ಕರೋನಾ ಸಮಯದಲ್ಲಿ ಈ ರೋಗದ ನಿಯಂತ್ರಣಕ್ಕಾಗಿ ದೇಶದ್ಯಂತ ಲಾಕ್ ಡೌನ್ ಸಮಯದಲ್ಲಿ ಸಂಘದ ಷೇರುದಾರ ಬಡ ಮಹಿಳೆಯರಿಗೆ ನೆರವಾಗುವ ದೃಷ್ಠಿಯಿಂದ ಆಹಾರ ಧಾನ್ಯದ ದಿನಸಿ ಕಿಟ್ ಹಾಗೂ ಮಾಸ್ಕ ವಿತರಣೆಯನ್ನು ಸಂಘದ ಪ್ರಧಾನ ಕಛೇರಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಶಾರದಾ ಮೇಸ್ತ , ಹಿರಿಯ ಪತ್ರಕರ್ತರಾದ ಜಿ.ಯು.ಭಟ್, ಉಪಾಧ್ಯಕ್ಷರಾದ ಭವಾನಿ ನಾಯ್ಕ, ನಿರ್ದೇಶಕರಾದ ವನಿತಾ ಶ್ಯಾನಭಾಗ, ಮಾಲಿನಿ ನಾಯ್ಕ, ಅನುಸುಯಾ ಶ್ಯಾನಭಾಗ, ವಿಜಯಾ ಪೈ, ತುಳಸಿ ಗೌಡ, ವಿಜಯಾ ಜೈನ್, ನಿಧಿ, ಮಾಧುರಿ ನಾಯ್ಕ, ವಿದ್ಯಾ ದೇವಳಿ, ಸವಿತಾ ಪಾವಸ್ಕರ್ ಹಾಜರಿದ್ದರು.
More Stories
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.
ಭಟ್ಕಳದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ,