
ಹೊನ್ನಾವರ; ತಾಲೂಕಿನ ಮಾವಿನಕುರ್ವಾ ಸಮಾನ ಮನಸ್ಕರ ಪೀಟರ್ ಮೇಂಡೊನ್ಸಾ ಅವರ ಸಹಭಾಗಿತ್ವದಲ್ಲಿ ಮೈಕಲ್ ಪಿ.ಡಿಸೋಜಾ, ಕೆಇಬಿ ಗುತ್ತಿಗೆದಾರ ಹೆನ್ರಿ ಲೀಮಾ, ಎಡ್ವೀನ್ ಡಿಸೋಜಾ, ವಿ. ಸ್ಟಾರ್ ಗ್ರೂಪ್ ರೋಲಗಲ್ ಫರ್ನಾಡಿಂಸ್ ಕಾಸರಕೋಡದ ಜಾಕೊ ಮಟಾಜೋ, ದರ್ಶನ್ ಇಲ್ಟೆಟಿಕ್ ಗುತ್ತಿಗೆದಾರ ಭಾಗವತ ಸಹಾಯಹಸ್ತದೊಂದಿಗೆ ಗ್ರಾಮದ ಬಡಜನತೆಗೆ ಒಟ್ಟು ೫೦೦ ಕಿಟ್ ವಿತರಿಸಿದರು. ಅಲ್ಲದೆ ಗ್ರಾಮದಲ್ಲಿ ಹಗಲಿರುಳು ಶ್ರಮಿಸಿದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಪೀಟರ್ ಮೇಂಡೊನ್ಸಾ ಮಾತನಾಡಿ ಈಗಾಗಲೇ ಗ್ರಾಮದ ೪೦೦ಕ್ಕೂ ಅಧಿಕ ಕಿಟ್ ನೀಡಲಾಗಿದೆ. ಬಡವರಿಂದ ಬಡವರಿಗಾಗಿ ಕಿಟ್ ನೀಡುವ ಉದ್ದೇಶದಿಮದ ಇಂದು ೫೦೦ ಕಿಟ್ ವಿತರಿಸುತ್ತೆವೆ. ಒಟ್ಟು ಗ್ರಾಮದಲ್ಲಿ ೯೦೦ ಕಿಟ್ ವಿತರಿಸಿದ್ದೇವೆ. ನಾವು ಕಿಟ್ ಕೊಡುತ್ತಿರುವುದು ಉಳಿದ ಗ್ರಾಮಕ್ಕೆ ಮಾದರಿಯಾಗಲಿಎಂದರು .
ಕೆಇಬಿ ಗುತ್ತಿಗೆದಾರ ಹೆನ್ರಿ ಲೀಮಾ ಮಾತನಾಡಿ ಕಷ್ಟದಲ್ಲಿರುವರಿಗೆ ಸಹಾಯ ಮಾಡುವುದು ಮನುಕುಲದ ಧರ್ಮ ಈ ದೃಷ್ಟಿಯಲ್ಲಿ ಇಂದು ನಿಮ್ಮ ಕಷ್ಟವನ್ನು ಸ್ವಲ್ಪ ಮಟ್ಟಿಗೆ ದೂರ ಮಾಡಲು ನಾವು ಈ ಕಿಟ್ ವಿತರಿಸುತ್ತಿದ್ದೇವೆ. ದ್ವೀಪದಂತಿರುವ ಪ್ರದೇಶವಾದಈ ಸ್ಥಳದಲ್ಲಿ ಬಡ ಕುಟುಂಬದ ಸಂಖ್ಯೆ ಜಾಸ್ತಿ ಇದೆ ಕೊರೊನಾ ಮಾರಣಾಂತಿಕ ಖಾಯಿಲೆ ದೂರವಾಗಬೇಕಾದರೆ ಜನರು ಜಾಗ್ರತಿ ಹೊಂದಬೇಕು. ಜನರ ಸಹಕಾರ ಅಗತ್ಯ, ಎಲ್ಲರೂ ಸೇರಿ ಕೊರೊನಾ ವಿರುದ್ಧ ಹೋರಾಡೋಣ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನಾರಾಯಣ ಗೌಡ, ಮಾದೇವ ಗೌಡ, ರೋಲಗನ್ ಕಾಸರಕೋಡ ಉಪಸ್ಥಿತರಿದ್ದರು.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.