March 30, 2023

Bhavana Tv

Its Your Channel

ಅಧಿಕಾರಿಗಳಿಗೆ ತಾಲೂಕಿನ ಜನತೆ ಸಹಕರಿಸುವಂತೆ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ ಮನವಿ

ಹೊನ್ನಾವರ: ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಕರೋನಾ ಪ್ರಕರಣ ದ್ರಢಪಟ್ಟಿದ್ದು ಈ ಬಗ್ಗೆ ತಾಲೂಕಿನ ಜನತೆ ಧ್ರತಿಗೆಡದೆ ತಾಲೂಕಾ ಆಡಳಿತದೊಂದಿಗೆ ಸಹಕರಿಸುವಂತೆ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ್ ಭಂಡಾರಿ ಮನವಿ ಮಾಡಿದ್ದಾರೆ.
ಈಗಾಗಲೇ ತಾಲೂಕಿನ ವ್ಯಾಪ್ತಿಯಲ್ಲಿ ಇವರೆಗೆ 7 ಕರೋನಾ ಪ್ರಕರಣ ದಾಖಲಾಗಿದ್ದು ಇವರೆಲ್ಲರೂ ಮುಂಬೈನಿಂದ ಪ್ರಯಾಣಿಸಿ ಪಟ್ಟಣದ ಸರ್ಕಾರಿ ಕ್ವಾರಂಟೇನ್ ಹಾಗೂ ಹೊಟೇಲ್ ಗಳಲ್ಲಿ ಇರುವರಿಗೆ ಕರೋನಾ ಸೊಂಕು ದ್ರಢ ಪಟ್ಟಿದ್ದು ಹೊನ್ನಾವರ ತಾಲೂಕಿನ ಇತರ ಕಡೆಗಳಲ್ಲಿ ಈ ಸೊಂಕು ಹರಡಿರುವುದಿಲ್ಲ. ಕಾಲಕಾಲಕ್ಕೆ ಸೊಂಕು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ತಾಲೂಕಾ ಆಡಳಿತ, ಪೋಲಿಸ್ ಇಲಾಖೆ,ಪಟ್ಟಣ ಪಂಚಾಯತ, ಆರೋಗ್ಯ ಇಲಾಖೆ ಹೊರಡಿಸುವ ಸೂಚನೆಯನ್ನು ಪಾಲಿಸುವಂತೆ ಹಾಗೂ ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಜನತೆಯಲ್ಲಿ ಮನವಿ ಮಾಡಿದ್ದಾರೆ.

About Post Author

error: