![](https://kannada.bhavanatv.com/wp-content/uploads/2020/05/WhatsApp-Image-2020-05-26-at-11.11.51-AM.jpeg?v=1590472161)
ಶಿರಸಿ: ಚಲಿಸುತ್ತಿದ್ದ ವಾಹನವೊಂದು ಆಕಸ್ಮಿಕ ಬೆಂಕಿ ತಗುಲಿ ರಸ್ತೆ ಮಧ್ಯೆಯಲ್ಲಿ ವಾಹನ ಸುಟ್ಟು ಕರಕಲಾದ ಘಟನೆ ಶಿರಸಿ ತಾಲೂಕಿನ ನಿರ್ನಳ್ಳಿ ಬಳಿ ಸಂಭವಿಸಿದೆ.
ಮಂಗಳವಾರ ಮುಂಜಾನೆ ಶಿಂಗನಮನೆ ವಿನಾಯಕ ಹೆಗಡೆ ಎನ್ನುವವರಿಗೆ ಸೇರಿದ ಓಮಿನಿ ಮಾರ್ಗಮಧ್ಯೆ ಅನಿಲ ಸೋರಿಕೆ ಕಾರಣದಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದು ಬೆಂಕಿಯು ಸುತ್ತಮುತ್ತಲೂ ವ್ಯಾಪಿಸುದನ್ನು ತಡೆದಿದ್ದಾರೆ. ಶಿರಸಿ ಗ್ರಾಮೀಣ ಠಾಣಾ ಪೋಲಿಸರು ಸ್ಥಳಕ್ಕೆ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ
More Stories
ದ್ವಾರಮಂಟಪ ಉದ್ಘಾಟನೆ ಹಾಗೂ ವಾರ್ಷಿಕ ಸ್ನೇಹ ಸಮ್ಮೆಳನ
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ