May 5, 2024

Bhavana Tv

Its Your Channel

ಸಾಮಾಜಿಕ ಹೋರಾಟಗಾರ ಗೋಪಾಲ ಶೆಟ್ಟಿ ನಿಧನ.

ಹೊನ್ನಾವರ:- ತಾಲೂಕಿನ ಕವಲಕ್ಕಿಯ ಗ್ರಾಮೀಣ ಭಾಗದಲ್ಲಿ ಜನಿಸಿ ಗ್ರಾಮ ಪಂಚಾಯತಿ ಸದಸ್ಯರಾಗಿ, ಪಿ.ಎಲ್.ಡಿ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ ನಿರ್ದೆಶಕರಾಗಿ ಕಾರ್ಯ ನಿರ್ವಹಿಸಿದ ಗೋಪಾಲ ಶೆಟ್ಟಿ ಕವಲಕ್ಕಿ ೫೨ ನೇ ವಯಸ್ಸಿನಲ್ಲಿ ಹೃದಯಘಾತದಿಂದ ಬುಧವಾರ ಮುಂಜಾನೆ ನಿಧನರಾದರು. ಸತತ ೩೦ ವರ್ಷಗಳಿಂದ ವಿವಿಧ ಸಾಮಾಜಿಕ ಸಮಸ್ಯೆಗಳಿಗೆ ಹೋರಾಟದ ಮೂಲಕ ನ್ಯಾಯ ಒದಗಿಸಿದ್ದಾರೆ. ಗಾಣಿಗ ಸಮಾಜದ ಶ್ರೀನಿಧಿ ಸೇವಾ ವಾಹಿನಿಯಲ್ಲಿ ೧೫ ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಸಮಾಜದ ಪ್ರಾಥಮಿಕ ಹಾಗೂ ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ಉಚಿತ್ ನೋಟ್ ಬುಕ್ ನೀಡುವ ಮೂಲಕ ಸಮಾಜಕ್ಕೂ ಮಾದರಿಯಾಗಿದ್ದರು. ಇವರ ನಿಧನಕ್ಕೆ ಬಾಳೆಗದ್ದೆ ವೆಂಕ್ರಟಮಣ ದೇವಾಲಯದ ಆಡಳಿತ ಕಮೀಟಿ, ಶ್ರೀನಿಧಿ ಸೇವಾ ವಾಹಿನಿ ಸಂಘಟನೆ, ಶಾಸಕ ದಿನಕರ ಶೆಟ್ಟಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಉದ್ಯಮಿ ರವಿಕುಮಾರ್ ಶೆಟ್ಟಿ, ಹಿರಿಯ ಸಾಹಿತಿ ಡಾ.ಶ್ರೀಪಾದ ಶೆಟ್ಟಿ, ಉದ್ಯಮಿ ಜಿ.ಜಿ.ಶಂಕರ್, ಜೆಡಿಎಸ್ ಮುಖಂಡ ಜಿ.ಎನ್.ಗೌಡ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

error: