ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ದ ಐತಿಹಾಸಿಕ ಸ್ಥಳವಾದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದಲ್ಲಿ ಕೊರೋನಾ ಹಿನ್ನಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕ ದರ್ಶನವನ್ನು ಮತ್ತೆ ಮುಂದೂಡಿದ್ದು, ಈ ಬಾರಿ ನಾಗರ ಪಂಚಮಿಗೂ ಸುಬ್ರಹ್ಮಣ್ಯ ದೇವರ ಸನ್ನಿದಿಗಾಗಲಿ ನಾಗಬನದಲ್ಲಿ ದರ್ಶನ ಪಡೆಯಲು ಅವಕಾಶವಿಲ್ಲ. ಆದರೆ ಪ್ರತಿವರ್ಷದಂತೆ ಆಚರಣೆ ಇದ್ದರೂ ಈ ಬಾರಿ ಸರಳವಾಗಿ ಆಚರಿಸುವ ಜೊತೆ, ನಾಗಬನದ ಪ್ರತಿ ಮೂರ್ತಿಗೂ ಪೂಜೆ ನೇರವೇರಿಸಲಾಗುವುದು ಭಕ್ತರು ಮನೆಯಲ್ಲಿ ಇದ್ದು ಸ್ಮರಿಸುವಂತೆ ಎಂದು ಆಡಳಿತ ಮಂಡಳಿಯವರು ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಆರ್.ಹೆಗಡೆ,ಟ್ರಸ್ಟ ಕಾರ್ಯದರ್ಶಿಗಳು ಗ್ರಾಮ ಪಂಚಾಯತ ಅಧ್ಯಕ್ಷರಾದ ಟಿ.ಎಸ್.ಹೆಗಡೆ ಕೊಂಡದಕೇರಿ, ಮ್ಯಾನೇಜರ್ ಸತ್ಯನಾರಾಯಣ ಹೆಗಡೆ ತೋಟಿ, ಸದಸ್ಯ ನಾರಾಯಣ ಹೆಗಡೆ ಉಪಸ್ಥಿತರಿದ್ದರು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.