
ಈ ಕುರಿತು ಮಾದ್ಯಮದವರೊಂದಿಗೆ ತಮ್ಮ ಅಳಲು ತೋಡಿಕೊಂಡ ಶಾರದಾ ಗೌಡ,” ಗೋಕರ್ಣದ ಸರ್ವೆ ನಂ. ೩೪೦ ರ ಹಿಸ್ಸಾ ೬ಬ ಕ್ಷೇತ್ರ ಒಂದು ಎಕರೆ ೧೧ ಗುಂಟೆ ಜಾಗಕ್ಕೆ ಸಂಬAಧಪಟ್ಟು ನಮ್ಮ ತಾಯಿ ಜಾನಕಿಬಾಯಿ ಅವರ ವಿಲ್ ನಾಮೆ ಮಾಡಿ ಸಂಪೂರ್ಣ ಜಾಗದ ಹಕ್ಕು ಸ್ವಾಮ್ಯವನ್ನು ನನ್ನ ಹೆಸರಿಗೆ ಬರೆದಿದ್ದರು. ವಿಲ್ನ ಬಗ್ಗೆ ಒಂದು ವರ್ಷದ ಹಿಂದೆಯೇ ನ್ಯಾಯಾಲಯದ ಆದೇಶವೂ ಆಗಿದ್ದು ನನ್ನ ಹೆಸರಿಗೆ ಖಾತೆ ವರ್ಗಾವಣೆಗೆ ಆದೇಶವಾಗಿದೆ. ಆದರೆ ಕುಮಟಾ ತಹಸೀಲ್ದಾರ್ ಕಾರ್ಯಾಲಯದಲ್ಲಿ ವಿನಾಕಾರಣ ನನ್ನನ್ನು ಸತಾಯಿಸುತ್ತಿದ್ದಾರೆ. ನನ್ನ ಆರೋಗ್ಯವೂ ಸರಿಯಿಲ್ಲ. ಪದೇಪದೇ ಓಡಾಡುವುದು ಸಾಧ್ಯವಾಗುವುದಿಲ್ಲ. ತಹಸೀಲ್ದಾರ್ ಅವರು ಫೆ.೧೭ ರಂದು ವಿಚಾರಣೆ ನಡೆಸುವುದಾಗಿ ತಿಳಿಸಿ ಮತ್ತೆ ದಿನಾಂಕವನ್ನು ಬದಲಾಯಿಸಿ ಮುಂದೆ ಹಾಕಿ ಫೆ. ೨೪ ಕ್ಕೆ ನನ್ನನ್ನು ಬರುವಂತೆ ತಿಳಿಸಿದ್ದರು. ಸೋಮವಾರ ಗೋಕರ್ಣದ ಮಹಾರಥೋತ್ಸವ ಇರುವದರಿಂದ ದಿನಾಂಕ ಬದಲಾಯಿಸಿ ಎಂದು ವಿನಂತಿಸಿದರೂ ಒಪ್ಪದೇ ಬರಲೇಬೇಕೆಂದು ಹೇಳಿದ್ದರು. ಆದರೆ ಇಂದು ಇಲ್ಲಿಗೆ ಬಂದರೆ ತಹಸೀಲ್ದಾರ್ ಅವರೇ ಇಲ್ಲ. ಅಲ್ಲದೇ ಇಲ್ಲದಿರುವ ಕುರಿತು ಮುಂಚಿತವಾಗಿ ತಿಳಿಸಿಯೂ ಇಲ್ಲ. ಹೀಗಾಗಿ ತಹಸೀಲ್ದಾರ್ ನನಗೆ ಕೆಲಸ ಮಾಡಿಕೊಡಬೇಕು ಅಥವಾ ಆಗುವುದಿಲ್ಲವೆಂದು ಬರೆದುಕೊಡಬೇಕು. ಅಲ್ಲಿಯವರೆಗೂ ಇಲ್ಲಿಂದ ಕದಲುವುದಿಲ್ಲ “ಎಂದು ಅವರು ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ಮೇಘರಾಜ ನಾಯ್ಕ,” ಅಂಕೋಲಾದ ಜವಾಬ್ದಾರಿಯೂ ನನಗೆ ಇರುವುದರಿಂದಾಗಿ, ತುರ್ತುಕಾರ್ಯ ನಿಮಿತ್ತ ಅಂಕೋಲಾಕ್ಕೆ ಬಂದಿದ್ದೆ. ಇನ್ನು ಧರಣಿ ನಡೆಸಿದ ಮಹಿಳೆಯ ವಿಷಯದಲ್ಲಿ ನಾನು ಯಾವುದೇ ಹೇಳಿಕೆ ನೀಡಲಾರೆ. ಅದು ಕೋರ್ಟಿನ ವಿಚಾರ “ಎಂದಿದ್ದಾರೆ.
More Stories
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಪ್ರಸಿದ್ಧ ವೈದ್ಯ ಡಾ. ವೆಂಕಟರಮಣ ಹೆಗಡೆ ಹಾಗೂ ಸಂಗೀತಾ ಹೆಗಡೆ ಅವರಿಗೆ ಹುಕ್ಕೇರಿ ಶ್ರೀಗಳಿಂದ ಗೌರವ.
ಭಟ್ಕಳ: ಚುನಾವಣೆ ಎದುರಿಸಲು ನನ್ನ ಬಳಿ ಹಣ ಇದ್ದಿಲ್ಲ. ಮಹೀಳೆಯರು ತಮ್ಮಲ್ಲಿರುವ ಚಿನ್ನವನ್ನು ಅಡವು ಇಟ್ಟು ನನಗೆ ಹಣ ತಂದುಕೊಟ್ಟಿದ್ದಾರೆ. ನಾನು ಯಾವತ್ತೂ ಹಣವನ್ನು ಪ್ರೀತಿಸಲಿಲ್ಲ, ಮನುಷ್ಯರನ್ನು ಪ್ರೀತಿಸಿದ್ದೇನೆ ಎಂದು ನೂತನವಾಗಿ ನೇಮಕಗೊಂಡಿರುವ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು