April 24, 2024

Bhavana Tv

Its Your Channel

ಭಟ್ಕಳ ತಾಲೂಕಿನ ಜಾಲಿ ರಸ್ತೆಯಲ್ಲಿ ನೂತನವಾಗಿ ಆರಂಭಗೊOಡ ಲೈಫ್‌ಕೇರ್ ಡೈಗ್ನೋಸ್ಟಿಕ್ ಮತ್ತು ಹೆಲ್ತ್ ಸೆಂಟರ್‌

ಭಟ್ಕಳ ; ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಕಾಝಿ ಮೌಲಾನ ಮುಹಮ್ಮದ್ ಇಕ್ಬಾಲ್ ಮುಲ್ಲಾ ಅವರು ಪ್ರಾರ್ಥನೆ ಮಾಡುವುದರ ಮೂಲಕ ರವಿವಾರ ವಿದ್ಯುಕ್ತವಾಗಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಲೈಫ್‌ಕೇರ್ ಸೆಂಟರ್ ಭಟ್ಕಳದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸೇರ್ಪಡೆಯಾಗಿದ್ದು ಇಲ್ಲಿನ ವಿವಿಧ ಸೌಲಭ್ಯಗಳು ಇಲ್ಲಿನ ಜನರಿಗೆ ಉತ್ತಮ ಆರೋಗ್ಯ ಭಾಗ್ಯ ನೀಡುವಂತಾಗಲಿ ಎಂದು ಹಾರೈಸಿದರು. ಭಟ್ಕಳದ ಸುತ್ತಮುತ್ತಲ ಜನರಿಗೆ ಉತ್ತಮ ಆರೋಗ್ಯ ಸೇವೆ ಲಭಿಸುವಂತಾಗಲಿ, ಜನರು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದೂ ಆಶಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ವೈದ್ಯ ಡಾ. ಸಿಬಗತುಲ್ಲಾ ಇಂತಹ ಸುಸಜ್ಜಿತ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮುಂದಾದ ಸಂಘಟಕರನ್ನು ಅಭಿನಂದಿಸಿ, ಇದರ ಪ್ರಯೋಜನ ಎಲ್ಲ ವರ್ಗದ ಜನತೆ ಪಡೆಯಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಭಟ್ಕಳ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ ಭಟ್ಕಳದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಒತ್ತಿ ಹೇಳಿದರು. ಈ ಕ್ಷೇತ್ರದಲ್ಲಿ ಹೆಚ್ಚಿನ ಖಾಸಗಿ ಸಂಸ್ಥೆಗಳು ಬರಬೇಕು ಮತ್ತು ನಗರದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಮಂಗಳೂರು ಮತ್ತು ಚೆನ್ನೈ ನಂತಹ ನಗರಗಳ ಕಡೆಗೆ ಮುಖ ಮಾಡದೆ ಸ್ಥಳಿಯವಾಗಿರುವ ಸಂಸ್ಥೆಗಳನ್ನು ಬೆಳೆಸುವುದರ ಕಡೆಗೆ ಗಮನ ಕೇಂದ್ರಿಕರಿಸಬೇಕು ಮತ್ತು ಲೈಫ್‌ಕೇರ್ ಡಯಾಗ್ನೋಸ್ಟಿಕ್ ಮತ್ತು ಆರೋಗ್ಯ ಕೇಂದ್ರವನ್ನು ಬೆಂಬಲಿಸಬೇಕು ಮತ್ತು ವೈದ್ಯಕೀಯ ಸಮಸ್ಯೆಗಳಿಗಾಗಿ ಅಂತಹ ನಗರಗಳಿಗೆ ತಿರುಗುವ ಪ್ರವೃತ್ತಿಯನ್ನು ಬಿಡಬೇಕು ಎಂದು ಜನರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಜುಮನ್ ಶಿಕ್ಷಣ ಸಂಸ್ಥೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ಮಜ್ಲಿಸ್-ಇ-ಇಸ್ಲಾಹ್-ವ-ತಂಜೀಮ್ ಅಧ್ಯಕ್ಷ ಎಸ್.ಎಂ.ಪರ್ವೇಜ್ ಮಾತನಾಡಿದರು. ಲೈಫ್‌ಕೇರ್ ಸೆಂಟರ್ ಇದರ ಪಾಲುದಾರರಾದ ಇಸ್ಮಾಯಿಲ್ ಜುಕಾಕು ಯೋಜನೆಯ ಕುರಿತು ವಿವರಿಸಿದರು.
ಅಪಘಾತ ಮತ್ತು ತುರ್ತು ಸಂದರ್ಭದಲ್ಲಿ ಹೈಟೆಕ್ ಪ್ರಯೋಗಾಲಯ, ವಿಶೇಷ ಚಿಕಿತ್ಸಾ ಘಟಕ, ಸುಧಾರಿತ ದಂತ ಮತ್ತು ಇಂಪ್ಲಾAಟ್‌ಗಳಲ್ಲಿ ಪರಿಣಿತ ಒಪಿಡಿ ಸೇವೆಗಳು, ಸ್ತಿçÃರೋಗ ವಿಭಾಗದ ಡೇಕೇರ್ ಕೇಂದ್ರ ಕರ್ತವ್ಯ ನಿರ್ವಹಿಸಲಿದೆ ಮುಂದಿನ ದಿನಗಳಲ್ಲಿ ಡೇಕೇರ್ ಸೇವೆಗಳಿಗೆ ವಿಸ್ತರಿಸಲಾಗುವುದು ಎಂದರು.

error: