May 19, 2024

Bhavana Tv

Its Your Channel

ಲಕ್ಷ್ಮೀ ಆನೆಗೆ ಜನಿಸಿದ ಕಂದನಿಗೆ ಇಂದು ನಾಮಕರಣ ಶಾಸ್ತ್ರ

ಬೆಳ್ತಂಗಡಿ : ಎರಡು ತಿಂಗಳ ಹಿಂದೆ ಇಲ್ಲಿನ ಲಕ್ಷ್ಮೀ ಆನೆಗೆ ಜನಿಸಿದ ಕಂದನಿಗೆ ಇಂದು ನಾಮಕರಣ ಶಾಸ್ತ್ರ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ದೇವರ ಪ್ರಸಾದ ತಿನ್ನಿಸಿ ಗಂಟೆ ಕಟ್ಟುವ ಮೂಲಕ ನಾಮಕರಣ ಮಾಡಿದರು. ತುಲಾ ಲಗ್ನ ಮುಹೂರ್ತದಲ್ಲಿ ಈ ಹೆಣ್ಣುಮರಿಗೆ ಶಿವಾನಿ ಎಂದು ನಾಮಕರಣ ಮಾಡಲಾಯಿತು. ಧರ್ಮಸ್ಥಳದ ಡಾ.ಡಿ ವಿರೇಂದ್ರ ಹೆಗ್ಗಡೆ ಅವರ ಮೊಮ್ಮಗಳು ಶಿವಾನಿ ಹೆಸರು ಉದ್ಘೋಷಿಸುವ ಮೂಲಕ ನಾಮಕರಣ ಮಾಡಿದರು. ಈ ಸಂದರ್ಭದಲ್ಲಿ ಶ್ರೀಧಾಮ‌ ಮಾಣಿಲದ ಮೋಹನದಾಸ ಸ್ವಾಮೀಜಿ ಅವರು ಆನೆಯ ಮಾವುತರನ್ನ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಹೇಮಾವತಿ ವಿ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಇತರರು ಹಾಜರಿದ್ದರು

error: